ಮುಂಬೈ : ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿರುವಂತ ಘಟನೆ ಇದಾಗಿದ್ದು, ಮರ್ಯಾದಾ ಹತ್ಯೆಯೆಂದೇ ಹೇಳಲಾಗುತ್ತಿದೆ. ಕಳೆದ ಜೂನ್ ನಲ್ಲಿ ಪ್ರಿಯಕರನೊಂದಿಗೆ ಔರಂಗಾಬಾದ್ ನ ಯುವತಿ ಕೀರ್ತಿ ಥೋರ್ ಓಡಿ ಹೋಗಿ ಮದುವೆಯಾಗಿದ್ದರು.
ಹೀಗೆ ಓಡಿಹೋಗಿದ್ದಂತ ಮಗಳಿಗೆ ಕರೆ ಮಾಡಿದ್ದಂತ ತಾಯಿ, ನಿನ್ನ ನೋಡಬೇಕು ಅನಿಸ್ತಾ ಇದೆ ಎಂದಿದ್ದಕ್ಕೇ ಆಕೆಯ ಮನೆಯ ವಿಳಾಸ ನೀಡೀ ಬರುವಂತೆ ತಿಳಿಸಿದ್ದಾಳೆ. ಭಾನುವಾರದಂದು ತಾಯಿ-ಮಗ ಕೀರ್ತಿ ಥೋರ್ ಮನೆಗೆ ತೆರಳಿ, ಮನೆಯಲ್ಲಿ ಪತಿಯನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕಿದಂತ ತಾಯಿ-ಮಗ, ಟೀ ಮಾಡುತ್ತಿದ್ದಂತ ಕೀರ್ತಿಗೆ ಹಿಂಬದಿಯಿಂದ ತಲೆಗೆ ಹೊಡಿದ್ದಾರೆ.
ಗರ್ಭಿಣಿಯಾಗಿದ್ದಂತ ಕೀರ್ತಿ ತಲೆಗೆ ಪೆಟ್ಟುಗೊಂಡು ಕುಸಿದು ಬಿದ್ದಾಗ, ತಾಯಿ ಆಕೆಯ ಕಾಲನ್ನು ಡಿದುಕೊಂಡ್ರೇ.. ಆಕೆಯ ಸಹೋದರ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ. ಹೀಗೆ ಮರ್ಯಾದೆ ಹತ್ಯೆಗೈದು, ಈ ವಿಚಾರ ಹೊರಗಡೆಯ ಜನರಿಗೆ ತಿಳಿಯಲಿ ಎಂದು ಹೊರಗೆ ಕತ್ತರಿಸಿದ ತಲೆಯನ್ನು ತಂದು ಸೆಲ್ಫಿಯನ್ನು ಅಮ್ಮ-ಮಗ ಕ್ಲಿಕ್ಕಿಸಿಕೊಂಡಿರೋದಾಗಿ ತಿಳಿದು ಬಂದಿದೆ.
ಈ ಸಂಬಂಧ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೀರ್ತಿಯನ್ನು ಹತ್ಯೆಗೈದಂತ ತಾಯಿ-ಮಗನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ನಗರದ ಹೊರವಲಯದ ಗುರುಪುರ ಕೈಕಂಬದಲ್ಲಿ ನಿರ್ಮಾಣ ಆಗಲಿರುವ ಮೆಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು .ಕಾಮಗಾರಿ ವಿರುದ್ಧದ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ…
ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಸಾಂಗೋಲಾ- ಜತ್ತ ಮಾರ್ಗದ ಬಳಿ…
ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…
ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…
ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…
ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.