ಮುಂಬೈ: ಪ್ರೇಯಸಿಯನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ ಯುವಕ

ಮುಂಬೈ : ಆಕೆ ಹಾಲುಗಲ್ಲದ ಚೆಲುವೆ, ಕಾಲೇಜ್‌ನಲ್ಲಿ  ಪ್ರೀತ್ಸೇ ಪ್ರೀತ್ಸೆ ಅಂತ ಹುಡುಗರೆಲ್ಲ  ಅವಳ ಹಿಂದೆ ಬೀಳುತ್ತಿದ್ದರು. ಆದರೆ ಆಕೆ ಮಾತ್ರ ಯಾರ ಕಡೆಯೂ ತಿರುಗಿಯೂ ನೋಡುತ್ತಿರಲಿಲ್ಲ. ಆತ ಆದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ. ಯಾರಿಗೂ ಸೋಲದಿದ್ದ ಆಕೆ ಆತನಿಗೆ ಸೋತು ಬಿಟ್ಟಿದ್ದಳು. ಇಬ್ಬರು ಪ್ರೀತಿಸುತ್ತಾ , ಕೆಲ ವರ್ಷಗಳೇ ಕಳೆದಿದ್ದರು. ಇನ್ನೇನು ಕಾಲೇಜ್ ಮುಗಿಸಿ, ಒಳ್ಳೆಯದ್ದೊಂದು ಕೆಲಸ  ಸಿಕ್ಕ ಬಳಿಕ ಮದುವೆಯಾಗಬೇಕು ಅಂತೆಲ್ಲ ಕನಸು ಕಂಡಿದ್ದರು. ಆದರೆ ಆ ಕನಸು ಇನ್ನು ಕನಸಾಗಿಯೇ ಉಳಿಯಲಿದೆ. ಅಸಲಿಗೆ ಇನ್ನು ಮುಂದೆ ಕನಸು ಕಾಣಲಿಕ್ಕೆ ಆ ಹುಡುಗಿಯೇ ಕಣ್ಮುಚ್ಚಿದ್ದಾಳೆ. ಪ್ರೀತಿಸಿದ್ದೀನಿ, ನಿನ್ನ ಮದುವೆಯಾಗಿ ಸುಖವಾಗಿ ನೋಡಿಕೊಳ್ಳುತ್ತೀನಿ ಎಂದಿದ್ದವನೇ ಆಕೆಯನ್ನು ಬರ್ಬರವಾಗಿ ಕೊಂದಿದ್ದಾನೆ.

ಆಕೆ ಹೆಸರು ಸಯ್ಯಾಲಿ ಶಹನಾಸೆ, 27 ವರ್ಷದ ಮುಂಬೈನ ವಸೈ ಪ್ರದೇಶದ ನಿವಾಸಿ. ಆಕೆ ಕಂಪ್ಯೂಟರ್ ಇಂಜಿನಿಯರ್ ಆಗಿದ್ದಳು. ಆತ ಸಾಗರ್ ಅರುಣ್ ನಾಯಕ್. ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾನೆ. ಅವರಿಬ್ಬರೂ ಒಂದೇ ಕಾಲೇಜ್‌ನಲ್ಲಿ ಓದುತ್ತಾ ಇದ್ದಾಗ, ಪ್ರೀತಿಸುತ್ತಾ ಇದ್ದರು. ಕಾಲೇಜ್‌ ಮುಗಿದು ಕೆಲಸಕ್ಕೆ ಸೇರಿದ್ದ ಇಬ್ಬರೂ, ಮದುವೆ ಆಗೋದಕ್ಕೂ ನಿರ್ಧರಿಸಿದ್ದರು.

ವಸೈ ವೆಸ್ಟ್‌ ಹೋಟೆಲ್‌ಗೆ ಕೊಠಡಿಗೆ ನಿನ್ನೆ ಸಾಗರ್ ಹಾಗೂ ಸಯ್ಯಾಲಿ ಬಂದಿದ್ದಾರೆ. ಇಬ್ಬರು ತುಂಬಾ ಹೊತ್ತು ಹೋಟೆಲ್‌ನಲ್ಲೇ ಇದ್ದಾರೆ. ಕೆಲ ಸಮಯದ ಬಳಿಕ ಸಾಗರ್ ಮಾತ್ರ ಅಲ್ಲಿಂದ ಹೋಗಿದ್ದಾನೆ. ಎಷ್ಟು ಹೊತ್ತಾದರೂ ಸಯ್ಯಾಲಿ ಕೋಣೆಯಿಂದ ಆಚೆ ಬರಲೇ ಇಲ್ಲ. ಅನುಮಾನಗೊಂಡ ಹೋಟೆಲ್‌ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದ್ದಾರೆ. ಅಷ್ಟರಲ್ಲಿ ಸಯ್ಯಾಲಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಸಾಗರ್ ಸಯ್ಯಾಲಿ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ. ಆಕೆ ಇನ್ನೂ ಉಸಿರಾಡುತ್ತಿರುವುದನ್ನು ನೋಡಿ, ಅಲ್ಲೇ ಬಿದ್ದಿದ್ದ ಕೊಳಾಯಿ ಪೈಪ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಬಳಿಕ ಆಕೆ ಕೂಗಿಕೊಳ್ಳದಂತೆ ಆಕೆಯ ಬಾಯಿ, ಮೂಗು ಒತ್ತಿ ಹಿಡಿದು, ಆಕೆ ಪ್ರಾಣ ಬಿಡುವವರೆಗೂ ಒತ್ತಿ ಹಿಡಿದ್ದಾನೆ. ಎಡ ಭಾಗದ ಕಿವಿ, ತಲೆಯಿಂದ ರಕ್ತ ಸುರಿಸುತ್ತಲೇ ಸಯ್ಯಾಲಿ ಪ್ರಾಣ ಬಿಟ್ಟಿದ್ದಾಳೆ.

ಸಯ್ಯಾಲಿ ನರಳಿ ನರಳಿ ಸಾಯುತ್ತಿದ್ದಂತೆ ಆಕೆಯ ಮೃತ ದೇಹದ ಎದುರೇ ಸಾಗರ್ ಊಟ ಮಾಡಿದ್ದಾನೆ. ಬಳಿಕ ಬಾಗಿಲು ಲಾಕ್ ಮಾಡಿ, ಏನೂ ಆಗಲಿಲ್ಲ ಎನ್ನುವಂತೆ ಹೊರಟಿದ್ದಾನೆ. ಆದಾದ ಮೇಲೆ ರೂಂ ಸರ್ವಿಸ್ ಬಿಲ್ ಪಾವತಿಸಿ, ತನ್ನ ಬೈಕನ್ನು ಅಲ್ಲಿಯೇ ಬಿಟ್ಟು ಸಾಗರ್ ಎಸ್ಕೇಪ್ ಆಗಿದ್ದಾನೆ.

ಸಯ್ಯಾಲಿ ಹಾಗೂ ಸಾಗರ್ ಕಳೆದ 7 ವರ್ಷಗಳಿಂದಲೂ ವಸೈ ಪ್ರದೇಶದ ‘ದಿ ರೂಮ್ಸ್ ಆಫ್ ಸ್ಟೇಟಸ್’ ಹೋಟೆಲ್‌ಗೆ ಬರುತ್ತಿದ್ದರು ಅಂತ ಅದರ ಮಾಲೀಕರು ಹೇಳಿದ್ದಾರೆ. ಅವರಿಬ್ಬರು ಮಧ್ಯರಾತ್ರಿ ಕೊಠಡಿ 208ಗಾಗಿ ಆನ್‌ಲೈನ್ ಬುಕಿಂಗ್ ಮಾಡಿದ್ದಾರೆ. ತಿಂಗಳಿಗೆ ಎರಡು ಬಾರಿಯಾದರೂ ಖಾಯಂ ಆಗಿ ಅದೇ ರೂಂಗೆ ಬರುತ್ತಾರೆ.

ಸಾಗರ್ ಕೋಣೆಯಿಂದಲೇ ಕೆಲವು ಪಾನೀಯಗಳು ಮತ್ತು ಆಹಾರವನ್ನು ಆರ್ಡರ್ ಮಾಡಿದ. ಸಂಜೆ 5.30ಕ್ಕೆ ಬಿಲ್ ಕೇಳಿ 6 ಗಂಟೆಗೆ ಕೌಂಟರ್ ಗೆ ಇಳಿದು ಆಯಪ್ ಮೂಲಕ ಹಣ ಪಾವತಿಸಿ ಹೊರಟು ಹೋದ ಅಂತ ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ರಾತ್ರಿಯಿಂದಲೂ ಟಿವಿ ಸೌಂಡ್ ಜೋರಾಗಿ ಇಟ್ಟಿದ್ದ ಸಾಗರ್,. ಕೋಣೆಯಿಂದ ಯಾರೂ ಹೊರಬಾರದೇ ಇರೋದ್ರಿಂದ ಇಂಟರ್‌ಕಾಮ್ ಕರೆ ಮಾಡಿದ್ದಾರೆ. ಆದರೆ ಯಾರೂ ಉತ್ತರಿಸದೇ ಇರೋದ್ರಿಂದ ಹೋಟೆಲ್ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದಾಗ, ಬೆಡ್‌ ಶೀಟ್ ಮೇಲೆ ಸ್ಯಯಾಲಿ ರಕ್ತಸಿಕ್ತ ದೇಹ ಬಿದ್ದಿತ್ತು.

ವಸಾಯಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸಾಗರ್ ಬಂಧನದ ಬಳಿಕ ಸಯ್ಯಾಲಿ ಕೊಲೆಗೆ ಕಾರಣ ಏನು ಎನ್ನುವುದು ತಿಳಿಯಲಿದೆ.

Gayathri SG

Recent Posts

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

18 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

31 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

41 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago