ಮುಂಬ್ರಾ : ತಮ್ಮ ಮನೆಯತ್ತ ನೋಡಿ ಉಗುಳಿದನೆಂಬ ಕಾರಣಕ್ಕೆ ನೆರೆಮನೆಯ 13 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆ ಇಲ್ಲಿಗೆ ಸಮೀಪದ ದಿವಾ ಎಂಬಲ್ಲಿ ನಡೆದಿದೆ.
ಬಾಲಕನ ನೆರೆಮನೆಯಲ್ಲಿ ವಾಸವಿದ್ದ, ದೂರದ ಸಂಬಂಧಿಯೂ ಆಗಿರುವ ವ್ಯಕ್ತಿಯೇ ಕ್ಷುಲ್ಲಕ ಕಾರಣಕ್ಕೆ ಈ ರೀತಿ ಭೀಭತ್ಸವಾಗಿ ಹತ್ಯೆ ಮಾಡಿದ್ದಾನೆ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಏ. 25ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಆರೋಪಿಯನ್ನು ದಶರಥ ಕಾಕಡೆ (28) ಎಂದು ಗುರುತಿಸಲಾಗಿದೆ. ರೂಪೇಶ್ ವಿಜಯ್ ಗೋಲೆ (13) ಎಂಬ ಬಾಲಕನ ಮನೆಯ ಪಕ್ಕದಲ್ಲೇ ಈತನೂ ವಾಸವಿದ್ದಾನೆ. ಏ. 17ರಂದು ಮಧ್ಯಾಹ್ನದ ಬಳಿಕ ಕಾಕಡೆಯು ರೂಪೇಶ್ನನ್ನು ಕರೆದುಕೊಂಡು ಬಟ್ಟೆ ಖರೀದಿಸಲೆಂದು ಹೋಗಿದ್ದಾನೆ.
ಆದರೆ, ರೂಪೇಶ್ ಮನೆಗೆ ವಾಪಸಾಗಲೇ ಇಲ್ಲ. ಇದರಿಂದ ಆತಂಕಗೊಂಡ ರೂಪೇಶ್ ಅಣ್ಣ, ದಶರಥ್ ಕಾಕಡೆಗೆ ಕರೆ ಮಾಡಿ ಕೇಳಿದಾಗ, ತಾನು ರೂಪೇಶ್ಗೆ 50 ರೂ. ಕೊಟ್ಟು ಜಾತ್ರೆಗೆ ಕಳುಹಿಸಿದ್ದಾಗಿ ಉತ್ತರಿಸಿದ್ದಾನೆ. ಬಳಿಕ ಬಾಲಕ ಕಾಣೆಯಾಗಿರುವ ಕುರಿತು ರೂಪೇಶ್ ಅಣ್ಣ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿದ ಅಧಿಕಾರಿ ಎಸ್.ಕೆ. ಶೇಳ್ಕೆ, ಬಾಲಕ ಕಾಣೆಯಾಗಿದ್ದರಲ್ಲಿ ದಶರಥನ ಕೈವಾಡ ಇರುವ ಶಂಕೆ ವ್ಯಕ್ತವಾಯಿತು. ಎಲ್ಲಿ ಬಟ್ಟೆ ಖರೀದಿಸಲು ಹೋಗಿದ್ದೆ, ಯಾವ ಜಾತ್ರೆಯಲ್ಲಿ ಬಿಟ್ಟು ಬಂದೆ ಎಂದು ನಾವು ಆತನನ್ನು ಪ್ರಶ್ನಿಸಿದೆವು. ಬೀದಿ ಬದಿ ವ್ಯಾಪಾರಿ ಬಳಿ ಬಟ್ಟೆ ಖರೀದಿಸಲು ಹೋಗಿದ್ದಾಗಿ ಆರೋಪಿ ಉತ್ತರಿಸಿದ. ಅಲ್ಲಿ ಹೋಗಿ ಕೇಳಿದಾಗ ಆತ ಬಂದಿರಲಿಲ್ಲ ಎಂದು ಗೊತ್ತಾಯಿತು. ದಶರಥನನ್ನು ಬಂಧಿಸಿ ತೀವ್ರವಾಗಿ ವಿಚಾರಿಸಿದಾಗ ರೂಪೇಶ್ನನ್ನು ಹತ್ಯೆ ಮಾಡಿರುವ ಸಂಗತಿ ಬಾಯಿ ಬಿಟ್ಟಿದ್ದಾನೆ.
ಏ. 17ರಂದು ಮುಚ್ಚಿರುವ ಶೌಚಾಲಯವೊಂದರ ಮೊದಲ ಮಹಡಿಗೆ ರೂಪೇಶ್ನನ್ನು ಕರೆದೊಯ್ದ ದಶರಥ, ಅಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ದಶರಥನ ಮನೆಯತ್ತ ನೋಡಿ ರೂಪೇಶ್ ಉಗುಳಿದ್ದರಿಂದ ಇಬ್ಬರ ನಡುವೆ ಜಗಳವಾಗಿತ್ತು. ಸೇಡು ತೀರಿಸಿಕೊಳ್ಳಲು ಆತನನ್ನು ಕೊಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…
17ನೇ ಆವೃತ್ತಿಯ ಐಪಿಎಲ್ನ ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ತಂಡಗಳು ಈ…
ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್ಸ್ಕಿನ್ ಇರುವವರೂ…
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…