ಪುಣೆ: ಜಿಲ್ಲೆಯ ಕನ್ಹೆ ಗ್ರಾಮದ ಬಳಿ ಶನಿವಾರ ನಸುಕಿನಲ್ಲಿ ಮಿನಿ ಟ್ರಕ್ವೊಂದು ಪಾದಯಾತ್ರೆ ಹೊರಟಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾರಕರಿಗಳು (ಪಂಢರಪುರದ ವಿಠ್ಠಲ ದೇವರ ಭಕ್ತರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ.)
ರಾಯಗಡ ಜಿಲ್ಲೆಯ ವಾರಕರಿಗಳು ಪುಣೆಯಿಂದ 25 ಕಿ.ಮೀ. ದೂರದಲ್ಲಿರುವ ಆಳಂದಿಗೆ ತೆರಳುತ್ತಿದ್ದರು.
‘ಹಳೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಕರಿಗಳು ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಗಾಯಗೊಂಡರು. ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಗಾಯಗೊಂಡರ ಪೈಕಿ ಇಬ್ಬರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೃತಪಟ್ಟರು’ ಎಂದು ಪೊಲೀಸ್ ಅಧಿಕಾರಿ ವಿಲಾಸ್ ಭೋಸ್ಲೆ ತಿಳಿಸಿದರು.
ಮಿನಿ ಟ್ರಕ್ ಚಾಲಕನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದರು.