News Karnataka Kannada
Thursday, May 02 2024
ಮಹಾರಾಷ್ಟ್ರ

ನಾಗ್ಪುರ: ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ

Dead
Photo Credit :

ನಾಗ್ಪುರ, ಏ.5 : ಸಾವಿನ ಕುರಿತು ಕವನಗಳು ಮತ್ತು ಉಲ್ಲೇಖಗಳನ್ನು ಬರೆದ ನಂತರ 13 ವರ್ಷದ ಬಾಲಕಿಯೊಬ್ಬಳು ಮಹಾರಾಷ್ಟ್ರದ ನಾಗ್ಪುರದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಜ್ನಿ ಪ್ರದೇಶದ ಚಂದ್ರಮಣಿ ನಗರದ ನಿವಾಸಿ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ.

ಅಜ್ನಿ ಪ್ರದೇಶದ ಚಂದ್ರಮಣಿ ನಗರದ ನಿವಾಸಿ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಲಕಿಯ ತಾಯಿ ಬಾತ್‍ರೂಮ್‍ನಲ್ಲಿದ್ದಾಗ ಮತ್ತು ಆಕೆಯ ಸಹೋದರ ಡ್ರಾಯಿಂಗ್ ರೂಮ್‍ನಲ್ಲಿದ್ದಾಗ ಬಾಲಕಿ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಳ್ಳುತ್ತಿದ್ದಾಳೆ.ತಾಯಿ ಮಲಗುವ ಕೋಣೆಗೆ ಹೋದಾಗ ಮಗಳ ಮೃತದೇಹ ನೇತಾಡುತ್ತಿರುವುದು ಕಂಡುಬಂದಿದೆ.

ಬಾಲಕಿ ಕಳೆದ ಎರಡು ತಿಂಗಳಿನಿಂದ ಮರಾಠಿ ಮತ್ತು ಇಂಗ್ಲಿಷ್‍ನಲ್ಲಿ ಸಾವಿನ ಕುರಿತು ಕವನಗಳು ಬರೆಯುತ್ತಿದ್ದಳು. ಬಾಲಕಿಯ ಮಲಗುವ ಕೋಣೆಯಲ್ಲಿ ಪೊಲೀಸರು ನೋಟ್‍ಬುಕ್ ಅನ್ನು ಕಂಡು ಪರಿಶೀಲಿಸಿದ್ದಾರೆ. ಅದರಲ್ಲಿ ಕೊರೊನಾವೈರಸ್ ಹರಡಬೇಕು, ಅದರಿಂದ ನಾನು ಸಾಯಬೇಕು ಎಂದು ಬರೆದಿದ್ದಾಳೆ. ಬಾಲಕಿ ವಿದ್ಯಾಭ್ಯಾಸದಲ್ಲಿ ಉತ್ತಮಳಾಗಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ತಾಯಿಯೊಂದಿಗೆ ಕೊನೆಯ ಬಾರಿ ಮಾತನಾಡಿದಾಗ ಆಕೆಯ ನಡವಳಿಕೆ ಸಾಮಾನ್ಯವಾಗಿತ್ತು ಎಂದು ಹೇಳಲಾಗಿದೆ. ಅಜ್ನಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು