ದೆಹಲಿ: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ವಿಶ್ವದಗಲದ ಅಭಿಮಾನಿಗಳನ್ನು ಸಂಪಾದಿಸಿರುವ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಒಬ್ಬ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಕೂಡಾ. ಹೌದು. . .ಇಂದು ಕೋಟಿ ಒಡೆಯನಾಗಿರುವ ಕಿಂಗ್ ಕೊಹ್ಲಿ ಹಿಂದೆ ಬೆನ್ನೆಲುಬಾಗಿ ಒಬ್ಬ ಮಾಸ್ಟರ್ ಮೈಂಡ್ ಗೆಳೆಯನ ಶಕ್ತಿಯಿದೆ.
ಮೊದಲಿನಿಂದಲೂ ಕೊಹ್ಲಿಗೆ ಹೋಟೆಲ್ ಬ್ಯುಸಿನೆಸ್ ಮಾಡಬೇಕು ಎನ್ನುವ ಕನಸಿತ್ತು. ಆದರೆ ಕ್ರಿಕೆಟ್ ನಲ್ಲಿ ಸದಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಕೊಹ್ಲಿಗೆ ಇತ್ತ ಬ್ಯುಸಿನೆಸ್ ಗೆ ತಲೆ ಹಾಕಲು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಈ ಸಂದರ್ಭದಲ್ಲಿ ಕೊಹ್ಲಿಯ ಕನಸನ್ನು ನನಸು ಮಾಡಲು ನಿಂತಿದ್ದು ಕೊಹ್ಲಿಯ ಜೀವದ ಗೆಳೆಯ ವರ್ತಿಕ್ ತಿಹಾರ.
ವಿರಾಟ್ ಕೊಹ್ಲಿ ಹಾಗು ವರ್ತಿಕ್ ತಿಹಾರ ಬಾಲ್ಯದಿಂದಲೂ ಉತ್ತಮ ಸ್ನೇಹಿತರು. ಬಾಲ್ಯದಿಂದಲ್ಲೂ ಇಬ್ಬರು ಕ್ರಿಕೆಟರ್ ಆಗಬೇಕು ಎನ್ನುವ ಕನಸನ್ನು ಕಂಡಿದ್ದರು. ಆದರೆ ಕ್ರಿಕೆಟ್ ವರ್ತಿಕ್ ತಿಹಾರ ಕೈ ಹಿಡಿಯಲಿಲ್ಲ. ಆದರೆ ಅವರು ಬ್ಯುಸಿನೆಸ್ ನಲ್ಲಿ ಮುಂದೆ ಬಂದರು. ಕೊಹ್ಲಿ ಸಹ ಒನ್ 8 ಕಮ್ಯೂನ್ ರೆಸ್ಟೊರೆಂಟ್ ಆರಂಭಿಸುತ್ತಾರೆ. ನಂತರ ಈ ರೆಸ್ಟೊರೆಂಟ್ ಬ್ಯುಸಿನೆಸ್ ಅನ್ನೂ ವರ್ತಿಕ್ ತಿಹಾರ ಅವರು ಸಕ್ಸಸ್ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ ಅವರ ಬ್ಯುಸಿನೆಸ್ ನಲ್ಲಿ ತನ್ನನ್ನ ತಾನು ತೊಡಗಿಕೊಂಡ ವರ್ತಿಕ್ ಈ ಸಕ್ಸಸ್ ನ ಸೂತ್ರದಾರನಾಗಿದ್ದಾರೆ.
ಇಂದು ದೆಹಲಿ, ಪುಣೆ, ಬೆಂಗಳೂರು ಹೀಗೆ ಹಲವು ಕಡೆ ಒನ್ 8 ಕಮ್ಯೂನ್ ಬ್ರ್ಯಾಂಚ್ ಓಪನ್ ಆಗಿ ಯಶಸ್ಸು ಕಂಡಿದೆ. ಕೊಹ್ಲಿಯ ಕನಸನ್ನ ನನಸು ಮಾಡಿದ, ಕೊಹ್ಲಿಯನ್ನ ಕೋಟಿ ಕುಬೇರನನ್ನಾಗಿಸಿದ ಜೀವದ ಗೆಳೆಯ ವರ್ತಿಕ್ ತಿಹಾರ. ಇಂದು ಸುಮಾರು 113 ಕೋಟಿಗೂ ಅಧಿಕ ಬ್ರ್ಯಾಂಡ್ ವ್ಯಾಲ್ಯೂ ಅನ್ನು ಹೊಂದಿದೆ ಅಂದರೆ ಅದರಲ್ಲಿ ಕೊಹ್ಲಿಯ ಜೀವದ ಗೆಳೆಯ ವರ್ತಿಕ್ ಅವರ ಶ್ರಮ ಅಪಾರವಿದೆ.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…