Categories: ಕೇರಳ

ಪರ್ವತ ಏರುವ ಸಾಹಸಕ್ಕೆ ಕೋಟಿ ಕೋಟಿ ರೂ. ಬ್ಯಾಂಕ್‌ ಸಾಲ: ಕೇರಳದ ಸಾಹಸಿ ವ್ಯಕ್ತಿಯ ಅಚ್ಚರಿಯ ಹವ್ಯಾಸ

ತಿರುವನಂತಪುರಂ: ನಾವೂ, ನೀವು ಸೇರಿದಂತೆ ಹೆಚ್ಚಿನವರು ಮನೆ ನಿರ್ಮಾಣ, ಕಾರು ಖರೀದಿಗೆ ಸಾಲ ಪಡೆಯುವುದು ಸಾಮಾನ್ಯ. ಆದರೆ ಕೇರಳದ ವ್ಯಕ್ತಿಯೊಬ್ಬರು ಪರ್ವತ ಏರುವ ಸಾಹಸಕ್ಕಾಗಿ ಬ್ಯಾಂಕ್‌ ಸಾಲ ಪಡೆಯುತ್ತಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಪಂದಳಂ ಮೂಲದ 36 ವರ್ಷದ ಕೇರಳದ ಸರ್ಕಾರಿ ನೌಕರ ಶೇಖ್ ಹಸನ್ ಖಾನ್ ಈ ಸಾಹಸಮಯಿ ವ್ಯಕ್ತಿ. ಖಾನ್‌ ರಾಜ್ಯ ಸಚಿವಾಲಯದಲ್ಲಿ ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಖಾನ್‌ ಅವರು ಮೌಂಟ್ ಎವರೆಸ್ಟ್ ಮತ್ತು ಕಿಲಿಮಂಜಾರೊವನ್ನು ಏರಿದ್ದಾರೆ. ತನ್ನ ಪರ್ವತ ಏರುವ ಸಾಹಸದ ಬಗ್ಗೆ ಅಮೆರಿಕದ ಡೆನ್ವರ್‌ನಿಂದ ಫೋನ್‌ನಲ್ಲಿ ಐಎಎನ್‌ಎಸ್‌ನೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದಾರೆ. ತನ್ನ ಮುಂದಿನ ಚಾರಣವು ಅಲಾಸ್ಕಾ ಪರ್ವತ ಶ್ರೇಣಿಯ ಮೂರನೇ ಅತಿ ಎತ್ತರದ ಶಿಖರವಾದ ಮೌಂಟ್ ಡೆನಾಲಿ ಏರುವುದರೊಂದಿಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಪರ್ವತ ಏರಲು ಅವರ ಜೊತೆಗೆ ಮೂವರು ಅಮೆರಿಕನ್ನರಿದ್ದಾರೆ. ಕಳೆದ ವರ್ಷ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದಾಗ ಅವರೊಂದಿಗೆ ಅಮೆರಿಕದ ಒಬ್ಬರು ಸಾಥ್‌ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ನನಗೆ 185 ದೇಶಗಳ ಅತ್ಯಂತ ಎತ್ತರದ ಶಿಖರಗಳನ್ನು ಏರುವ ನನ್ನ ಗುರಿಯಿದೆ. ಈ ಗುರಿ ತಲುಪಲು ಐದು ವರ್ಷಗಳ ರಜೆ ತೆಗೆದುಕೊಳ್ಳಲು ಯೋಜಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜುಲೈನಲ್ಲಿ ನಾನು ರಷ್ಯಾಕ್ಕೆ ಆಗಸ್ಟ್‌ನಲ್ಲಿ ಜಪಾನ್‌ಗೆ ತಲುಪುತ್ತೇನೆ. 2023 ಕ್ಕೆ, ವಿವಿಧ ದೇಶಗಳಲ್ಲಿ 15 ಶಿಖರಗಳನ್ನು ಏರುವುದು ನನ್ನ ಗುರಿ ಎಂದು ಖಾನ್ ಹೇಳಿದ್ದಾರೆ.
ಆದರೆ ತನ್ನ ಗುರಿಯನ್ನು ಸಾಧಿಸಲು ಖಾನ್ ಅವರಿಗೆ ಪರ್ವತದ ಸಮಸ್ಯೆ ಇದೆ. ಅದಕ್ಕಾಗಿ ಅವರಿಗೆ ಸುಮಾರು 2.50 ಕೋಟಿ ರೂ. ಅಗತ್ಯವಿದೆ. ಅದಕ್ಕಾಗಿ ಅವರು ಪ್ರಾಯೋಜಕರನ್ನು ಹುಡುಕುತ್ತಿದ್ದಾರೆ.

ಖಾನ್ ಅವರು ಈಗ ಅವರು 2.5 ಮಿಲಿಯನ್ ರೂಪಾಯಿಗಳ ಸಾಲವನ್ನು ಹೊಂದಿದ್ದಾರೆ. ನಾನು ರಾಜ್ಯ ಸರ್ಕಾರಿ ಉದ್ಯೋಗವನ್ನು ಹೊಂದಿರುವುದರಿಂದ ಬ್ಯಾಂಕ್ ಸಾಲ ಪಡೆಯುವುದು ಸುಲಭವಾಗಿದೆ. ನನಗೆ ಮನೆ ನಿರ್ಮಿಸುವ ಯೋಚನೆಯಿಲ್ಲ. ಅಲ್ಲದೆ ನಾನು ಪಡೆದ ಸಾಲವನ್ನು ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಖಾನ್‌ ಅವರ ಪತ್ನಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಆಕೆ ಇವರ ಸಾಧನೆಯ ಬೆನ್ನೆಲುಬು. ಅಂತೆಯ ಅವರ ಆರು ವರ್ಷದ ಪುತ್ರಿ ಖಾನ್‌ ಸಾಧನೆಗೆ ಸ್ಪೂರ್ತಿಯಾಗಿದ್ದಾರೆ. ತಾನು ಏರುವ ಪ್ರತಿ ಶಿಖರದಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ಖಾನ್ ಮರೆಯುವುದಿಲ್ಲ. ಆತ್ಮತೃಪ್ತಿ, ಹವಾಮಾನ ಬದಲಾವಣೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಪರ್ವತ ಏರುವ ಸಾಹಸದ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಖಾನ್‌ ಸಾಹಸ ನಮಗೆಲ್ಲರಿಗೂ ಸ್ಪೂರ್ತಿಯೆಂದರೆ ತಪ್ಪಲ್ಲ.

Umesha HS

Recent Posts

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

15 mins ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

24 mins ago

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

31 mins ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

44 mins ago

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಇಬ್ಬರು ಮಹಿಳೆಯರಿಗೆ ಗಾಯ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ…

47 mins ago

ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : ಡೆತ್‌ನೋಟು ಪತ್ತೆ

ತನ್ನ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ…

58 mins ago