ಕೊಚ್ಚಿ: ಇತ್ತೀಚೆಗೆ ಸಣ್ಣ ಪುಟ್ಟ ವಿಷಯಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತಹುದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಎರ್ನಾಕುಲಂ ಆಲುವಾದಲ್ಲಿ ಯುವಕನೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷರೀಫ್ ಅವರ ಪುತ್ರ 28 ವರ್ಷದ ಅಜ್ಮಲ್ ಷರೀಫ್ ಅವರು ಕನ್ನಪದವು ಕಟುಪದಂನ ಆಲುವಾ ಯುಸಿ ಕಾಲೇಜು ಬಳಿ ಇರುವ ಅವರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಾಯುವ ಹತ್ತು ನಿಮಿಷಗಳ ಮೊದಲು, ಅಜ್ಮಲ್ ತನ್ನ ಸಾವನ್ನು ಪ್ರಕಟಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ. ಶುಕ್ರವಾರ ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಜ್ಮಲ್ನನ್ನು ಕಂಡ ಕುಟುಂಬಸ್ಥರು ಆತನನ್ನು ಅಲುವಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ. ಅಜ್ಮಲ್ ದುಬೈನಲ್ಲಿದ್ದು, ಅಲ್ಲಿ ಉತ್ತಮ ಕೆಲಸ ಸಿಗದೆ ಖಿನ್ನತೆಗೆ ಒಳಗಾಗಿದ್ದರು.