ತಿರುವನಂತಪುರಂ: ತಿರುವನಂತಪುರಂ-ನಾಗರ್ಕೋಯಿಲ್ ಹೆದ್ದಾರಿಯ ನೆಯ್ಯಟ್ಟಿಂಕರಾದ ಮೂನ್ನುಕಲ್ಲಿಮೂಡು ಎಂಬಲ್ಲಿ ಎರಡು ಕೆಎಸ್ಆರ್ಟಿಸಿ ಬಸ್ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 30 ಜನರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಶನಿವಾರ ರಾತ್ರಿ 10.30 ರ ಸುಮಾರಿಗೆ ಸಂಭವಿಸಿದೆ. ಎರಡು ಬಸ್ಸಿನ ಚಾಲಕರಾದ ಅನಿಲ್ ಕುಮಾರ್ ಮತ್ತು ಎಂ ಎಸ್ ಸುನಿ ಅವರು ಬಸ್ಸಿನೊಳಗೆ ಸಿಲುಕಿಕೊಂಡಿದ್ದು ಅಗ್ನಿಶಾಮಕ ತಂಡ ಹಾಗೂ ರಕ್ಷಣಾ ತಂಡದ ಕಾರ್ಯಾಚರಣೆಯ ಬಳಿಕ ಇಬ್ಬರನ್ನು ಹೊರತೆಗೆಯಲಾಯಿತು.
ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಿಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#WATCH | Kerala | Over 30 people injured in a collision between two buses of Kerala State Road Transport Corporation (KSRTC) in Neyyattinkara on the Thiruvananthapuram-Kanyakumari highway last night. The injured people were admitted to Thiruvananthapuram Medical College Hospital,… pic.twitter.com/A3Ft9NvK05
— ANI (@ANI) November 26, 2023