ಕಾಸರಗೋಡು : ದಾಂಪತ್ಯದಲ್ಲಿ ವಿರಸ ,ಬಿರುಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ . ಸತಿದೇವಿ ತಿಳಿಸಿದ್ದಾರೆ.
ವಿವಾಹ ನೋಂದಣಿ ಈಗ ಅನಿವಾರ್ಯವಾಗಿದೆ. ಇದರ ಜೊತೆಗೆ ದಂಪತಿಗೆ ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಕಲಾಲಯ ಜ್ಯೋತಿ , ಫೇಸ್ ಟು ಫೇಸ್ ಕಾರ್ಯಕ್ರಮಗಳ ಮೂಲಕ ಕೌನ್ಸಿಲಿಂಗ್ ನೀಡಲಾಗುವುದು. ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಯಂ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುವುದು . ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ಪ್ರತಿ ತಿಂಗಳು ಸಭೆ ಕರೆದು ಆಯಾ ಪ್ರದೇಶದ ಸಮಸ್ಯೆ ಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಆಯೋಗ ಅದಾಲತ್ ನಲ್ಲಿ ಅವರು ಮಾತನಾಡುತ್ತಿದ್ದರು.
32 ದೂರು ಗ ಳನ್ನು 13 ದೂರುಗಳನ್ನು ಇತ್ಯರ್ಥ ಗೊಳಿಸಲಾಯಿತು. ನಾಲ್ಕು ದೂರುಗಳ ಬಗ್ಗೆ ಪೊಲೀಸರ ವರದಿ ಕೇಳಲು ತೀರ್ಮಾನಿಸಲಾಯಿತು.
15 ದೂರುಗಳ ಬಗ್ಗೆ ಮುಂದಿನ ಅದಾಲತ್ ನಲ್ಲಿ ತೀರ್ಮಾನ ತೆಗೆದುಕೊಳ್ಳ ಲು ನಿರ್ಧರಿಸಲಾಯಿತು .ಅದಾಲತ್ ನಲ್ಲಿ ಮಹಿಳಾ ಠಾಣಾಧಿಕಾರಿ ಭಾನುಮತಿ , ನ್ಯಾಯವಾದಿ ರೇಣುಕಾ ದೇವಿ , ನ್ಯಾಯವಾದಿ ಟಿಟಿ ಮೋಲ್ ಕೆ . ಜೂಲಿ ,ರಮ್ಯಮೋ ಳ್ ಮೊದಲಾದವರು ಉಪಸ್ಥಿತರಿದ್ದರು