ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜೆ & ಕೆ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ಇಂದು (ಆ.01) ಕಣಿವೆಯಲ್ಲಿ ಅನೇಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿತು.
ಬಂಡಿಪೋರಾ, ಶ್ರೀನಗರ, ಶೋಪಿಯಾನ್, ಅನಂತನಾಗ್, ಅವಂತಿಪೋರಾ ಮತ್ತು ಪುಲ್ವಾಮಾ ಜಿಲ್ಲೆಗಳ 11 ಸ್ಥಳಗಳಲ್ಲಿ ಸಿಐಕೆ ದಾಳಿ ನಡೆಸಲಾಗುತ್ತಿದೆ.
“ಈ ದಾಳಿಗಳು ಭಯೋತ್ಪಾದಕರ ನೇಮಕಾತಿ ಪ್ರಕರಣದ ತನಿಖೆಯ ಭಾಗವಾಗಿದೆ. (ಎಫ್ಐಆರ್ ಸಂಖ್ಯೆ 06/2023 ಇತ್ತೀಚೆಗೆ ಪೊಲೀಸ್ ಠಾಣೆ ಸಿಐಕೆಯಲ್ಲಿ (ಜೈಶ್-ಎ-ಮೊಹಮ್ಮದ್ -ಜೆಎಂ-ಮಾಡ್ಯೂಲ್ ಗಡಿಯಾಚೆಯಿಂದ ನಿರ್ವಹಿಸಲಾಗುತ್ತಿದೆ) ಹೀಗಾಗಿ ಸಿಐಡಿ ಸಿಐಕೆ ತನಿಖೆ ನಡೆಸುತ್ತಿದೆ.
ಈ ಸ್ಥಳಗಳಲ್ಲಿ ಏಕಕಾಲದಲ್ಲಿ ಪೊಲೀಸರು ಶೋಧ ನಡೆಸಿದರು. “ಹೆಚ್ಚಿನ ಸ್ಥಳಗಳಲ್ಲಿ ತಪಾಸಣೆ ನಡೆಸುವುದರ ಜೊತೆಗೆ ಶಂಕಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸಿದ್ದಾರೆ” ಎಂದು ಮೂಲಗಳು ವರದಿ ಮಾಡಿವೆ.
ಏತನ್ಮಧ್ಯೆ, ಪುಲ್ವಾಮಾ ಜಿಲ್ಲೆಯ ರೋಹ್ಮೂ, ರಾಜ್ಪೋರಾ, ಕಾಕಪೋರಾ ಮತ್ತು ಕರಿಮಾಬಾದ್ ಸೇರಿದಂತೆ ಸ್ಥಳಗಳ ಮೇಲೆ ಮತ್ತು ಬುಡ್ಗಾಮ್ ಜಿಲ್ಲೆಯ ಕ್ರಾಲ್ಪೊರಾ ಪ್ರದೇಶದಲ್ಲಿರುವ ವಕೀಲ ಪರ್ವೇಜ್ ಅಹ್ಮದ್ ಶಾ ಅವರ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿದೆ. ಕಣಿವೆಯ ಇತರ ಕೆಲವು ಸ್ಥಳಗಳಲ್ಲಿ ಎನ್ಐಎ ಇದೇ ರೀತಿಯ ದಾಳಿಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.