News Karnataka Kannada
Tuesday, April 30 2024
ಜಮ್ಮು-ಕಾಶ್ಮೀರ

ಶ್ರೀನಗರ:ವಿಷಪೂರಿತ ಆಹಾರ ಸೇವಿಸಿ 39 ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Foood
Photo Credit :

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ಬಡಗಾಮ್‌ ಜಿಲ್ಲೆಯಲ್ಲಿ ಬಹುತೇಕ ಮಕ್ಕಳೇ ಒಳಗೊಂಡಂತೆ 39 ಜನರು ವಿಷಪೂರಿತ ಆಹಾರ ಸೇವಿಸಿ ಆಸ್ಪತ್ರೆ ಸೇರಿರುವ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಲ್ಲರಿಗೂ ಹೊಟ್ಟೆಗೆ ಸಂಬಂಧಿತ ತೊಂದರೆ ಎದುರಾಗಿತ್ತು.ಬಳಿಕ ಎಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬಡಗಾಮ್‌ನ ಚರಾರ್-ಎ-ಶರೀಫ್ ಪ್ರದೇಶದ ಜೈಗಿಪೋರಾ ಗ್ರಾಮದಲ್ಲಿ ಅರಿಶಿನವನ್ನು ಸೇರಿಸಿ ಬೇಯಿಸಿದ ಸಾಂಪ್ರದಾಯಿಕ ಅನ್ನವನ್ನು ಸೇವಿಸಿದ ಜನರು ಹೊಟ್ಟೆಯ ಸಮಸ್ಯೆಯಿಂದ ಬಳಲಿದ್ದಾರೆ.

‘ಈ ಅಸ್ವಸ್ಥರ ಪೈಕಿ 15 ಮಕ್ಕಳನ್ನು ಶ್ರೀನಗರದ ಜಿಬಿ ಪಂಥ್ ಆಸ್ಪತ್ರೆಗೆ, ಮೂವರನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ (ಶ್ರೀನಗರ) ದಾಖಲಿಸಲಾಗಿದೆ. ಉಳಿದವರನ್ನು ಚರಾರ್-ಎ-ಶರೀಫ್ ಪಟ್ಟಣದ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿದೆ’ ಎಂದು ಬಡ್ಗಾಮ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ತಜಮುಲ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.

ಸಂತ್ರಸ್ತ ಗ್ರಾಮಕ್ಕೆ ಎದುರಾಗಬಹುದಾದ ಯಾವುದೇ ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು