News Karnataka Kannada
Monday, April 29 2024
ಹರ್ಯಾಣ

ಕಾರಿಗೆ ಡಿಕ್ಕಿಯಾಗಿ ಕೆಲ ಮೀಟರ್‌ ಎಳೆದೊಯ್ದ ಟ್ರಕ್‌: ನಾಲ್ವರು ಸಾವು

Four killed as truck collides with car, pulls for a few metres
Photo Credit : IANS

ಗುರುಗ್ರಾಮ: ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯ ಝಾರ್ಸಾ ಮೇಲ್ಸೇತುವೆಯಲ್ಲಿ ಟ್ರಕ್ ವೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಸಾಹಿಬಾಬಾದ್ ಜಿಲ್ಲೆಯ ನಿವಾಸಿ ಉಮೇಶ್ ಪಾಲ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಗಾಜಿಯಾಬಾದ್‌ನಿಂದ ಭಿವಾಡಿಗೆ ಹೋಗುತ್ತಿದ್ದಾಗ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರಿನ ಟೈರ್‌ ಪಂಕ್ಚರ್‌ ಆಗಿದೆ. ಹೀಗಾಗಿ ಅವರು ರಸ್ತೆಬದಿಯಲ್ಲಿ ಕಾರನ್ನು ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದರು.

ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಟಾಟಾ 407 ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಪುಷ್ಪಾದೇವಿ (50), ಸತಾಕ್ಷಿ (32), ಪರಿ (2), ರೇಣು (27), ಚಾರು (11), ಆರೋಹಿ, ಯಶಿಕಾ, ಪ್ರಿಸಾ (2) ಮತ್ತು ಬದಿಯಲ್ಲಿ ನಿಂತಿದ್ದ ವಿದಾನ್ಶ್ (3) ಅವರನ್ನು ಟ್ರಕ್ ಕೆಲವು ಮೀಟರ್‌ಗಳವರೆಗೆ ಎಳೆದೊಯ್ದಿದೆ, ”ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಕ್ಯಾಂಟರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು