ಗುರುಗ್ರಾಮ: ದೆಹಲಿ-ಜೈಪುರ ಎಕ್ಸ್ಪ್ರೆಸ್ವೇಯ ಝಾರ್ಸಾ ಮೇಲ್ಸೇತುವೆಯಲ್ಲಿ ಟ್ರಕ್ ವೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಸಾಹಿಬಾಬಾದ್ ಜಿಲ್ಲೆಯ ನಿವಾಸಿ ಉಮೇಶ್ ಪಾಲ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಗಾಜಿಯಾಬಾದ್ನಿಂದ ಭಿವಾಡಿಗೆ ಹೋಗುತ್ತಿದ್ದಾಗ ದೆಹಲಿ-ಜೈಪುರ ಎಕ್ಸ್ಪ್ರೆಸ್ವೇಯಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದೆ. ಹೀಗಾಗಿ ಅವರು ರಸ್ತೆಬದಿಯಲ್ಲಿ ಕಾರನ್ನು ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದರು.
ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಟಾಟಾ 407 ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಪುಷ್ಪಾದೇವಿ (50), ಸತಾಕ್ಷಿ (32), ಪರಿ (2), ರೇಣು (27), ಚಾರು (11), ಆರೋಹಿ, ಯಶಿಕಾ, ಪ್ರಿಸಾ (2) ಮತ್ತು ಬದಿಯಲ್ಲಿ ನಿಂತಿದ್ದ ವಿದಾನ್ಶ್ (3) ಅವರನ್ನು ಟ್ರಕ್ ಕೆಲವು ಮೀಟರ್ಗಳವರೆಗೆ ಎಳೆದೊಯ್ದಿದೆ, ”ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಕ್ಯಾಂಟರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.