ಹರ್ಯಾಣ: ಹರ್ಯಾಣದ 80 ವರ್ಷದ ವ್ಯಕ್ತಿಯನ್ನು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಬಳಿಕ ಕುಟುಂಬಸ್ಥರೆಲ್ಲರೂ ಆಂಬ್ಯುಲೆನ್ಸ್ನಲ್ಲಿ ಶವವನ್ನು ಮನೆಗೆ ಸಾಗಿಸುತ್ತಿದ್ದ ವೇಳೆ ಅಚಾತುರ್ಯವೇ ಸಂಭವಿಸಿದೆ.
ಆಂಬ್ಯುಲೆನ್ಸ್ ನಲ್ಲಿ ಶವ ತೆಗೆದುಕೊಂಡು ಹೋಗುವಾಗ ರಸ್ತೆಗುಂಡಿಯೊಂದರ ಮೇಲೆ ಹಾದು ಹೋಗುವಾಗ ವ್ಯಕ್ತಿಗೆ ಜೀವ ಮತ್ತೆ ಬಂದಿದೆ, ಇದನ್ನು ಗಮನಿಸಿದ ಅವರ ಮೊಮ್ಮಗ, ಹೃದಯಬಡಿತವನ್ನೂ ಗಮನಿಸಿದ ತಕ್ಷಣ ಅಲ್ಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದುದಾಗ ಬದುಕಿದ್ದಾರೆಂದು ತಿಳಿದಿದೆ.
80 ವರ್ಷದ ವ್ಯಕ್ತಿ ದರ್ಶನ್ ಸಿಂಗ್ ಹೃದ್ರೋಗದಿಂದ ಬಳಲುತ್ತಿದ್ದು, ಕರ್ನಾಲ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಆದರೆ ಈ ಘಟನೆಯನ್ನು ಪವಾಡ ಎಂದೇ ಕುಟುಂಬದವರು ನಂಬಿದ್ದಾರೆ.
PC- NDTV