ಬೊಟಾಡ್ : 46 ಜನರ ಸಾವಿಗೆ ಕಾರಣವಾದ ಮದ್ಯ ದುರಂತಕ್ಕೆ ಸಂಬಂಧಿಸಿದಂತೆ ಎಎಂಒಎಸ್ ಕಂಪನಿಯ ನಿರ್ದೇಶಕರು ಮತ್ತು ಮ್ಯಾನೇಜರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಕಂಪನಿಯಿಂದ ಕದ್ದ ಸುಮಾರು ೬೦೦ ಲೀಟರ್ ಮೀಥೈಲ್ ಆಲ್ಕೋಹಾಲ್ ಅನ್ನು ಅಕ್ರಮ ಮದ್ಯ ತಯಾರಿಸಲು ಬಳಸಲಾಯಿತು, ಇದು ಜುಲೈ ಕೊನೆಯ ವಾರದಲ್ಲಿ ಬೊಟಾಡ್ ಮತ್ತು ಅಹಮದಾಬಾದ್ ಜಿಲ್ಲೆಯಲ್ಲಿ ದುರಂತಕ್ಕೆ ಕಾರಣವಾಯಿತು.
ಸಮೀರ್ ಪಟೇಲ್, ಇತರ ಮೂವರು ನಿರ್ದೇಶಕರು ಮತ್ತು ಮ್ಯಾನೇಜರ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬೊಟಾಡ್ ಸೆಷನ್ಸ್ ನ್ಯಾಯಾಧೀಶ ಕೀರ್ತಿದಾಬೆನ್ ಪ್ರಜಾಪತಿ, “ಹೂಚ್ ದುರಂತದ ತನಿಖೆಯು ಅತ್ಯಂತ ನಿರ್ಣಾಯಕ ಹಂತದಲ್ಲಿದೆ, ಅರ್ಜಿದಾರರಿಗೆ ಜಾಮೀನು ನೀಡಿದರೆ ಅವರು ತನಿಖೆಗೆ ಅಡ್ಡಿಪಡಿಸಬಹುದು ಅಥವಾ ತಿರುಚಬಹುದು” ಎಂದು ಹೇಳಿದರು.
ಹೂಚ್ ದುರಂತದ ನಂತರ, ರಾಜ್ಯ ಸರ್ಕಾರವು ಅಪರಾಧದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನೇಮಿಸಿದೆ. ಇದರ ನೇತೃತ್ವವನ್ನು ಪೊಲೀಸ್ ಅಧೀಕ್ಷಕ ನಿರ್ಲಿಪ್ತ್ ರಾಯ್ ವಹಿಸಿದ್ದಾರೆ.