ನವದೆಹಲಿ: ಭಾರತದಲ್ಲಿ ಪ್ರಯಾಣಿಕ ಕಾರುಗಳಿಗೆ ಆರು ಏರ್ ಬ್ಯಾಗ್ ಸುರಕ್ಷತಾ ನಿಯಮವನ್ನು ಸರ್ಕಾರ ಕಡ್ಡಾಯಗೊಳಿಸುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು(ಸೆ.13) ಹೇಳಿದ್ದಾರೆ.
ಡಿಕ್ಕಿಯ ಸಮಯದಲ್ಲಿ ಏರ್ ಬ್ಯಾಗ್ ಚಾಲಕ ಮತ್ತು ವಾಹನದ ಡ್ಯಾಶ್ ಬೋರ್ಡ್ ನಡುವೆ ಮಧ್ಯಪ್ರವೇಶಿಸುತ್ತದೆ, ಇದರಿಂದಾಗಿ ಗಂಭೀರ ಗಾಯಗಳನ್ನು ತಡೆಯುತ್ತದೆ.
ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ ಮಾತನಾಡುತ್ತಾ ಗಡ್ಕರಿ, ‘ನಾವು BNCAP ಆಡಳಿತವನ್ನ ಪರಿಚಯಿಸಿದ್ದೇವೆ, ಇದು ಕಾರುಗಳಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಾಧಿಸಲು 6 ಏರ್ ಬ್ಯಾಗ್’ಗಳನ್ನ ಬಯಸುತ್ತದೆ. ಇದು ಸ್ವಯಂಚಾಲಿತವಾಗಿ 6 ಏರ್ ಬ್ಯಾಗ್’ಗಳನ್ನ ಕಡ್ಡಾಯಗೊಳಿಸುವ ಅಗತ್ಯವಿಲ್ಲದೆ ಸ್ಟ್ಯಾಂಡರ್ಡ್ ಆಗಿ ನೀಡಲು ಕಂಪನಿಗಳನ್ನ ಒತ್ತಾಯಿಸುತ್ತದೆ’ ಎಂದು ಹೇಳಿದರು.