ಪಣಜಿ: ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾ ಸರ್ಕಾರ ಎಲ್ಲಾ ಆಯಾಮಗಳಲ್ಲಿ ವಿಫಲವಾಗಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ ಪಿ) ಅಧ್ಯಕ್ಷ ವಿಜಯ್ ಸರ್ದೇಸಾಯಿ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸರ್ದೇಸಾಯಿ, ಮಧ್ಯಪ್ರದೇಶದ ಚಂಬಲ್ ನ ಡಕಾಯಿತರಿಗಿಂತ ರಾಜ್ಯದ ಸಚಿವರು ಕೆಟ್ಟವರು ಎಂದು ಆರೋಪಿಸಿದರು, ಈ ಕಾರಣದಿಂದಾಗಿ ಗೋವಾಕ್ಕೆ ಶ್ರೀಮಂತ ವಲಸಿಗರಿದ್ದರೂ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಸಿಗುತ್ತಿಲ್ಲ ಎಂದು ಹೇಳಿದರು.
“ಶ್ರೀಮಂತ ವಲಸಿಗರನ್ನು ಹೊಂದಿದ್ದರೂ, ವಿದೇಶಿ ನೇರ ಹೂಡಿಕೆ ಗೋವಾಕ್ಕೆ ಬರುತ್ತಿಲ್ಲ, ಏಕೆಂದರೆ ಅವರು ಮೊದಲು ಮಂತ್ರಿಗಳಲ್ಲಿ ‘ಹೂಡಿಕೆ’ ಮಾಡಬೇಕು. ಮಧ್ಯಪ್ರದೇಶದ ಚಂಬಲ್ ನ ಡಕಾಯಿತರು ಚಾಕು ತೋರಿಸಿ ಲೂಟಿ ಮಾಡುತ್ತಿದ್ದರು. ಈ ಮಂತ್ರಿಗಳು ಅವರಿಗಿಂತ ಕೆಟ್ಟವರು. ಗೋವಾದಲ್ಲಿ ಡಕಾಯಿತರು ಸರ್ಕಾರವನ್ನು ನಡೆಸುತ್ತಿದ್ದಾರೆ” ಎಂದು ಫಟೋರ್ಡಾ ಶಾಸಕ ಸರ್ದೇಸಾಯಿ ಹೇಳಿದ್ದಾರೆ.
ಗೋವಾದಲ್ಲಿ 1 ಲಕ್ಷಕ್ಕೂ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ನೀತಿ ಆಯೋಗ ನೀಡಿರುವ ಅಂಕಿಅಂಶಗಳ ಬಗ್ಗೆ ಮಾತನಾಡಿದ ಸರ್ದೇಸಾಯಿ, ಮುಖ್ಯಮಂತ್ರಿ ಸಾವಂತ್ ಅವರು ಕೇವಲ 20,000 ಜನರು ಮಾತ್ರ ನಿರುದ್ಯೋಗಿಗಳಾಗಿದ್ದಾರೆ ಎಂದು ಅದನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
“ನೀತಿ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾ ಸರ್ಕಾರ ಎಲ್ಲಾ ಆಯಾಮಗಳಲ್ಲಿ ವಿಫಲವಾಗಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ ಪಿ) ಅಧ್ಯಕ್ಷ ವಿಜಯ್ ಸರ್ದೇಸಾಯಿ ಶನಿವಾರ ಹೇಳಿದ್ದಾರೆ.ಯಲ್ಲಿದ್ದು, ಗೋವಾ ದೇಶದ ಮೂರನೇ ಅತಿ ಹೆಚ್ಚು ನಿರುದ್ಯೋಗಿ ರಾಜ್ಯವಾಗಿದೆ ಎಂದು ಗೋವಾದ ನಿರುದ್ಯೋಗ ಅಂಕಿಅಂಶಗಳನ್ನು ನೀಡಿದೆ. ಆದಾಗ್ಯೂ, ರಾಜ್ಯದಲ್ಲಿ ಕೇವಲ 20,000 ಜನರು ಮಾತ್ರ ನಿರುದ್ಯೋಗಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಈ ಅಂಕಿಅಂಶಗಳು ಮುಖ್ಯಮಂತ್ರಿಯನ್ನು ಬದಲಾಯಿಸಲು ದಾರಿ ಮಾಡಿಕೊಡುತ್ತಿವೆ” ಎಂದು ಸರ್ದೇಸಾಯಿ ಹೇಳಿದರು.