ಪಣಜಿ: ಕರಾವಳಿ ಪ್ರದೇಶದ ಕೆಲವು ಶಾಸಕರು ಕಳವಳಗಳ ತೋರಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ಗೋವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಗೋವಾ) ಗೆ ಸಮುದ್ರ ಕೊರೆತ, ಸೂಕ್ಷ್ಮ-ಪ್ಲಾಸ್ಟಿಕ್ ಮತ್ತು ಪರಿಸರ ಸಮಸ್ಯೆಗಳನ್ನು ವಿವರಿಸಿದ್ದಾರೆ.
“ರಾಜ್ಯವು ಎದುರಿಸುತ್ತಿರುವ ಪರಿಸರ ಸಮಸ್ಯೆಯನ್ನು ಪರಿಹರಿಸುವಲ್ಲಿ ಐಐಟಿ ಗೋವಾ ಮಹತ್ವದ ಪಾತ್ರ ವಹಿಸಬೇಕು. ಗೋವಾವು ಹಸಿರು ಸಸ್ಯವರ್ಗ, ಪ್ರಾಚೀನ ಕಡಲತೀರಗಳು ಮತ್ತು ಶುದ್ಧ ಗಾಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಇದನ್ನು ಗೋವಾದ ಪ್ರತಿಯೊಬ್ಬರು ಪ್ರೀತಿಸುತ್ತಾರೆ ಮತ್ತು ಪ್ರಕೃತಿಯ ಉಡುಗೊರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ” ಎಂದು ಸಾವಂತ್ ಐಐಟಿ ಗೋವಾದ ಮೂರನೇ ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
“ಸಮುದ್ರ ಮಟ್ಟದಲ್ಲಿ ಬದಲಾವಣೆ ಕಂಡುಬಂದಿರುವುದರಿಂದ ಕಡಲ್ಕೊರೆತದಿಂದಾಗಿ ಹವಾಮಾನ ಬದಲಾವಣೆಯು ಕರಾವಳಿಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಪ್ರವಾಹ ಮತ್ತು ಅತಿಯಾದ ಮಳೆಗೆ ಕಾರಣವಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಎದುರಿಸಲು ಐಐಟಿ-ಗೋವಾವನ್ನು ನಾನು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದರು.
ನಮ್ಮ ಆಹಾರ ಸರಪಳಿಯಲ್ಲಿ, ವಿಶೇಷವಾಗಿ ಮೀನುಗಳಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ನ ಅಪಾಯವು ಹೆಚ್ಚುತ್ತಿದೆ ಎಂದು ಅವರು ಹೇಳಿದರು. “ಬೇಡಿಕೆ ಮತ್ತು ಪೂರೈಕೆ ಸರಪಳಿ ಎರಡಕ್ಕೂ ಪರಿಹಾರ ಕ್ರಮಗಳನ್ನು ಒದಗಿಸಲು ಐಐಟಿ ಗೋವಾ ಸಂಶೋಧನಾ ಅಧ್ಯಯನವನ್ನು ನಡೆಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ವಾಯು ಗುಣಮಟ್ಟ ಕ್ಕಾಗಿ ಮುನ್ಸೂಚನೆ ನೀಡುವ ಸಾಧನಗಳನ್ನು ಅಭಿವೃದ್ಧಿಪಡಿಸಲು ಐಐಟಿ ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಸಹಕರಿಸುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಫೇಸ್ ಶೀಲ್ಡ್ ತಯಾರಿಸಿದ್ದಕ್ಕಾಗಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಒದಗಿಸಿದ್ದಕ್ಕಾಗಿ ಐಐಟಿ-ಗೋವಾವನ್ನು ಅವರು ಶ್ಲಾಘಿಸಿದರು.
“ಇದು ಸಾಮಾಜಿಕ ಬದ್ಧತೆಗೆ ಉತ್ತಮ ಉದಾಹರಣೆಯಾಗಿದೆ. ಐಐಟಿ ವಿವಿಧ ಕ್ಷೇತ್ರಗಳಲ್ಲಿ ನಮಗೆ ಸಹಾಯ ಮಾಡುತ್ತಿದೆ. ಇದು ವಿವಿಧ ವಿಷಯಗಳು ಮತ್ತು ಆಡಳಿತದಲ್ಲಿ ನಮಗೆ ಸಹಾಯ ಮಾಡುತ್ತಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯನ್ನು ಸುಗಮವಾಗಿ ನಡೆಸಲು ಐಐಟಿ ಗೋವಾ ‘ಚಾರ್ಟ್ ಬೋರ್ಡ್’ ಅನ್ನು ಅಭಿವೃದ್ಧಿಪಡಿಸಿದೆ” ಎಂದು ಐಐಟಿ-ಗೋವಾದ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ನವೋದ್ಯಮವನ್ನು ಉತ್ತೇಜಿಸಲು ಮತ್ತು ರಾಜ್ಯವನ್ನು ಐಟಿ ಸ್ನೇಹಿಯಾಗಿಸಲು ಐಐಟಿ-ಗೋವಾ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ಸಮುದ್ರ ಕೊರೆತವು ಪ್ರವಾಸೋದ್ಯಮ ಉದ್ಯಮಕ್ಕೆ ಪ್ರಮುಖ ಬೆದರಿಕೆಯಾಗಿದೆ, ಇದನ್ನು ಹೊಸ ಪರಿಕಲ್ಪನೆಗಳೊಂದಿಗೆ ನಿಭಾಯಿಸುವ ಅಗತ್ಯವಿದೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಇತ್ತೀಚೆಗೆ ಹೇಳಿದ್ದರು. ಕಡಲ್ಕೊರೆತದಿಂದಾಗಿ ಕಡಲತೀರಗಳು ಕೊಚ್ಚಿಹೋಗುತ್ತಿರುವ ಬಗ್ಗೆ ಕರಾವಳಿ ಪ್ರದೇಶದ ಶಾಸಕರು ಕಳವಳ ವ್ಯಕ್ತಪಡಿಸಿದ್ದರು.