News Karnataka Kannada
Monday, April 29 2024
ದೆಹಲಿ

ಕಾಂಗ್ರೆಸ್ ಇರುವಾಗ ಕಾಲ್ಪನಿಕ ಕಥೆ ‘ಮನಿ ಹೈಸ್ಟ್ ‘ ಯಾರಿಗೆ ಬೇಕು: ಮೋದಿ ಟ್ವೀಟ್

Who wants Congress' 'money heist' fairy tale: PM Modi
Photo Credit : News Kannada

ದೆಹಲಿ:  ಐಟಿ ಇಲಾಖೆಯಿಂದ ಚಲಾವಣೆಗೊಂಡ ನೋಟು ಕರೆನ್ಸಿಗಳ ರಾಶಿಯನ್ನು ಒಳಗೊಂಡಿರುವ ಬಿಜೆಪಿ ಪೋಸ್ಟ್ ಮಾಡಿದ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡು ಮೋದಿ ‘ಭಾರತದಲ್ಲಿ,70 ವರ್ಷಗಳ ಕಾಲ ದಂತಕಥೆಯಾಗಿರುವ ಕಾಂಗ್ರೆಸ್ ಪಕ್ಷ ಇರುವಾಗ, ‘ ಮನಿ ಹೈಸ್ಟ್ ‘ ಕಾಲ್ಪನಿಕ ಕಥೆ ಯಾರಿಗೆ ಬೇಕು!  ಎಂದು ಬರೆದುಕೊಂಡು “ಕಾಂಗ್ರೆಸ್  ಪ್ರೆಸೆಂಟ್ಸ್ ಮನಿ ಹೈಸ್ಟ್” ಎಂಬ ಶೀರ್ಷಿಕೆಯೊಂದಿಗೆ  ಟ್ವೀಟ್ ಮಾಡಿದ್ದರು.

ಒಡಿಶಾದ  ಡಿಸ್ಟಿಲರಿಗಳ ಮೇಲಿನ ಸರಣಿ ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆಯು ಸುಮಾರು ₹350 ಕೋಟಿ ಕಪ್ಪುಹಣ ಮತ್ತು ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಪ್ರಧಾನಿ ಮನಿ ಹೈಸ್ಟ್ ಅನ್ನು ಉಲ್ಲೇಖಿಸಿದ್ದಾರೆ.

ದೇಶವಾಸಿಗಳು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ಅದರ (ಕಾಂಗ್ರೆಸ್) ನಾಯಕರ ಪ್ರಾಮಾಣಿಕತೆಯ ಭಾಷಣಗಳನ್ನು  ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನು ಹಿಂತಿರುಗಿಸಬೇಕಾಗುತ್ತದೆ. ಇದು ಮೋದಿಯವರ ಗ್ಯಾರಂಟಿ  ಎಂದು ಮೋದಿ ಹೇಳಿದ್ದರು..

ಇದಕ್ಕೂ ಮುನ್ನ, ಶುಕ್ರವಾರದಂದು, ಮೋದಿ ಅವರು ಸಾಹುಗೆ ಸಂಬಂಧಿಸಿರುವ ವ್ಯಾಪಾರ ಗುಂಪಿನ ವಿವಿಧ ಸ್ಥಳಗಳಿಂದ ಐಟಿ ಇಲಾಖೆಯು ನಗದು ರೂಪದಲ್ಲಿ ವಸೂಲಿ ಮಾಡಿರುವ ಸುದ್ದಿ ವರದಿಯನ್ನು ಟ್ಯಾಗ್ ಮಾಡುವ ಮೂಲಕ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು