ಪ್ಯೂಮಾ ಜೊತೆ ವಿರಾಟ್ ಕೊಹ್ಲಿ ನಂಟು ಕಟ್: ಇನ್ನುಮುಂದೆ ಅಜಿಲಿಟಾಸ್ ಗೆ ಬ್ರ್ಯಾಂಡ್ ಅಂಬಾಸಡರ್

ನವದೆಹಲಿ: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪ್ಯೂಮಾ ಜೊತೆ ಎಂಟು ವರ್ಷದಿಂದ ಇದ್ದ ಒಪ್ಪಂದದಿಂದ ಹಿಂದಕ್ಕೆ ಸರಿದು, ಅಜಿಲಿಟಾಸ್ ಸ್ಪೋರ್ಟ್ಸ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ.

ಜಗದ್ವಿಖ್ಯಾತ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಆದ ಪ್ಯೂಮಾ ಜೊತೆ ವಿರಾಟ್​ ಕೊಹ್ಲಿ ನಂಟು 2017ರಲ್ಲಿ ಆರಂಭವಾಗಿತ್ತು. ಎಂಟು ವರ್ಷ ಕಾಲ ಅವರು ಬ್ರ್ಯಾಂಡ್ ಅಂಬಾಸಡರ್ ಆಗಲು 110 ಕೋಟಿ ರೂ ಮೊತ್ತದ ಡೀಲ್ ಆಗಿತ್ತು. ಈಗ ಒಪ್ಪಂದದ ಅವಧಿ ಬಹುತೇಕ ಮುಗಿದಿದೆ.

2023ರ ಮೇ ತಿಂಗಳಲ್ಲಿ ಅಭಿಷೇಕ್ ಗಂಗೂಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಒಂದು ವರ್ಷದ ಒಳಗಾಗಿ ಸಾಕಷ್ಟು ಪ್ರಗತಿ ಕಂಡಿದೆ ಇವರ ಕಂಪನಿ.

ವಿರಾಟ್ ಕೊಹ್ಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್​ಗೆ ಬ್ರ್ಯಾಂಡ್ ಅಂಬಾಸಡರ್ ಆಗಿರುವುದು ಮಾತ್ರವಲ್ಲ, ಕಂಪನಿಯಲ್ಲಿ ಪಾಲುದಾರರೂ ಹೌದು. ಇದೇ ಕಾರಣಕ್ಕೆ ಅವರು ಪ್ಯೂಮಾ ಜೊತೆಗಿನ ಡೀಲ್ ಅನ್ನು ಕೈಬಿಟ್ಟು ಎಜಿಲಿಟಾಸ್​ಗೆ ಬಂದಿರಬಹುದು.

ಇತ್ತೀಚೆಗಷ್ಟೇ ನೆಕ್ಸಸ್ ವೆಂಚರ್ ಎಂಬ ಕಂಪನಿಯಿಂದ ಎಜಿಲಿಟಾಸ್ ಸ್ಪೋರ್ಟ್ಸ್​ಗೆ 100 ಕೋಟಿ ರೂ ಫಂಡಿಂಗ್ ಕೂಡ ಪಡೆದಿದೆ.

ಎಜಿಲಿಟಾಸ್ ಸ್ಪೋರ್ಟ್ಸ್  ಅಡಿಡಾಸ್, ರೀಬೋಕ್ ಮೊದಲಾದ ಬ್ರ್ಯಾಂಡ್​​ಗಳಿಗೆ ಶೂಗಳನ್ನು ತಯಾರಿಸಿಕೊಡುವ ಮೋಚಿಕೋ ಶೂಸ್ ಪ್ರೈ ಲಿ ಎಂಬ ಕಂಪನಿಯನ್ನು ಸೆಪ್ಟೆಂಬರ್​ನಲ್ಲಿ ಖರೀದಿ ಮಾಡಲಾಗಿತ್ತು. ಈಗ ಇನ್ನಷ್ಟು ಫಂಡಿಂಗ್ ಸಿಕ್ಕಿರುವುದರಿಂದ ಇನ್ನಷ್ಟು ಕಂಪನಿಗಳನ್ನು ಖರೀದಿಸಬಹುದು.

Ashika S

Recent Posts

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

10 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

1 hour ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

2 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

2 hours ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

3 hours ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

3 hours ago