ನವದೆಹಲಿ: ಕಾವೇರಿ ಒಡಲು ಖಾಲಿಯಾಗಿದ್ದರು ತಮಿಳುನಾಡಿಗೆ ನೀರು ಹರಿಯುತ್ತಿದೆ. ನೀರು ಖಾಲಿಯಾದ ಮೇಲೆ ಸರ್ಕಾರ ಸಂಸದರ ಜೊತೆ ಸಭೆ ನಡೆಸಿದೆ. ರೈತರ ಕಾವೇರಿ ಕಿಚ್ಚು ಜೋರಾಗಿದೆ. ಈ ನಡುವೆ ಅನ್ನದಾತರ ಹೋರಾಟಕ್ಕೆ ಸ್ಯಾಂಡಲ್ವುಡ್ ಕೈಜೋಡಿಸಿದೆ. ಈ ನಡುವೆ ಇಂದು ಸುಪ್ರೀಂಕೋರ್ಟ್ನಲ್ಲಿ ಕಾವೇರಿದ ವಿಚಾರಣೆ ನಡೆಯಲಿದ್ದು ಕರ್ನಾಟಕದ ಚಿತ್ತ ಸುಪ್ರೀಂನತ್ತಇದೆ.
ಕನ್ನಡ ನಾಡಿನ ಜೀವನದಿ ಕಾವೇರಿ. ಈ ಬಾರಿ ವರುಣ ಕೈಕೊಟ್ಟ ಪರಿಣಾಮ ಕಾವೇರಿ ನದಿ ಪಾತ್ರಗಳು ಬರಿದಾಗಿವೆ. ಬರದ ಛಾಯೆ ರಾಚುತ್ತಿದೆ. ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಕಾರ್ಮೋಡ ಕವಿದಿದೆ. ಈ ವಿವಾದ ಸುಪ್ರೀಂಕೋರ್ಟ್ ಕಟಕಟೆಯಲ್ಲಿದೆ.
ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರು ಹರಿಸಿಲ್ಲ ಅಂತ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಎರಡೂ ರಾಜ್ಯಗಳ ಜೊತೆ ಸಭೆ ನಡೆಸಿ ಕಾವೇರಿ ನೀರು ಪ್ರಾಧಿಕಾರ ವರದಿಯನ್ನ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದು ಇದರ ಆಧಾರದ ಮೇಲೆ ವಿಚಾರಣೆ ನಡೆಯಲಿದೆ.