News Karnataka Kannada
Tuesday, April 30 2024
ದೆಹಲಿ

ನವದೆಹಲಿ: ಎಂಬ್ರೇರ್ ಲಂಚ ಪ್ರಕರಣ, ವಕೀಲ ಗೌತಮ್ ಖೈತಾನ್ ಅವರನ್ನು ಬಂಧಿಸಿದ ಸಿಬಿಐ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಮರಳನ್ನು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ‌ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
Photo Credit : Pixabay

ನವದೆಹಲಿ: ಬ್ರೆಜಿಲ್ ವಿಮಾನ ತಯಾರಕರೊಬ್ಬರು ಮಧ್ಯವರ್ತಿಯೊಬ್ಬರಿಗೆ ಕಿಕ್ ಬ್ಯಾಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ ಆರು ವರ್ಷಗಳ ನಂತರ ಸಿಬಿಐ ದೆಹಲಿ ಮೂಲದ ವಕೀಲ ಗೌತಮ್ ಖೈತಾನ್ ಅವರನ್ನು ಬಂಧಿಸಿದೆ ಎಂದು ಸಂಸ್ಥೆ  ತಿಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯೊಂದಿಗೆ 210 ಮಿಲಿಯನ್ ಡಾಲರ್ ಮೌಲ್ಯದ ಮೂರು ವಿಮಾನಗಳ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು. ಬ್ರೆಜಿಲಿಯನ್ ಕಂಪನಿ ಎಂಬ್ರೇರ್ 2008 ರಲ್ಲಿ ಒಪ್ಪಂದವನ್ನು ತನ್ನ ಪರವಾಗಿ ಸ್ವಿಂಗ್ ಮಾಡಲು ಯುಕೆ ಮೂಲದ ಎನ್ಆರ್ಐಗೆ ಕಿಕ್ ಬ್ಯಾಕ್ ಪಾವತಿಸಿದೆ ಎಂದು ಆರೋಪಿಸಲಾಗಿದೆ. ಈ ವಿಷಯದಲ್ಲಿ ಸುಮಾರು ೫.೭೬ ಮಿಲಿಯನ್ ಡಾಲರ್ ಕಿಕ್ ಬ್ಯಾಕ್ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.

“ಹಣದ ವನ್ನು ಸ್ಥಳಾಂತರಿಸುವಲ್ಲಿ ಖೈತಾನ್ ಪ್ರಮುಖ ಪಾತ್ರ ವಹಿಸಿದ್ದರು. ವಿದೇಶ ಮತ್ತು ಭಾರತದಲ್ಲಿನ ವಿವಿಧ ಘಟಕಗಳ ಸಹಾಯದಿಂದ, ಹಣವನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲಾಗಿದೆ” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಖೈತಾನ್ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿ ಹೇಳಿದರು. ಅವರನ್ನು ವಿಚಾರಣೆಗೊಳಪಡಿಸಲಾಯಿತು ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬ್ರೆಜಿಲಿಯಂ ಪತ್ರಿಕೆಯು ನೀಡಿದ ವರದಿಯ ಆಧಾರದ ಮೇಲೆ ಸಿಬಿಐ ಈ ಪ್ರಕರಣವನ್ನು ದಾಖಲಿಸಿದೆ.

ಡಿಆರ್ಡಿಒ ದೊಂದಿಗೆ ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ ಇಎಂಬಿ -145 ವಿಮಾನ ಒಪ್ಪಂದವನ್ನು ಮಾಡಬೇಕಾಗಿತ್ತು. ವಿಮಾನಕ್ಕೆ ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ (ಎಇಡಬ್ಲ್ಯೂ & ಸಿ) ವ್ಯವಸ್ಥೆಯನ್ನು ಅಳವಡಿಸಬೇಕಾಗಿತ್ತು. ಖೈತಾನ್ ಈ ಒಪ್ಪಂದದಲ್ಲಿ ಭಾಗಿಯಾಗಿದ್ದರು ಮತ್ತು ಕಿಕ್ ಬ್ಯಾಕ್ ಹಣವನ್ನು ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು