ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನ್ನದಾತರ ಸಮರ ರೈತ ದಂಗಲ್ 4ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹಾಗೂ ರೈತರ ನಡುವಿನ ರಣರಂಗ ಮತ್ತಷ್ಟು ತೀವ್ರಗೊಂಡಿದೆ. ರೈತರನ್ನು ಕಟ್ಟಿಹಾಕಲು ಭದ್ರತಾಪಡೆ ಸೇನಾನಿಗಳಂತೆ ಹೋರಾಡುತ್ತಿದ್ದಾರೆ.
ಸಾವಿರಾರು ರೈತರಿಂದ ದೆಹಲಿ ಚಲೋಗೆ ಯುದ್ಧಕ್ಕೆ ಹೊರಟವರಂತೆ ಅನ್ನದಾತರು ನುಗ್ಗುತ್ತಿದ್ದಾರೆ. ರೈತರನ್ನ ತಡೆಯಲು ಪೊಲೀಸರ ರಣವ್ಯೂಹ ರಚನೆ ಮಾಡಿದ್ದಾರೆ.
ರೈತರ ಪ್ರತಿಭಟನೆ ಕಾವೇರುತ್ತಿರುವ ಹಿನ್ನೆಲೆಯಲ್ಲಿ ಹರಿಯಾಣದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್ ಸೇರಿ ಏಳು ಜಿಲ್ಲೆಗಳಲ್ಲಿ ನಾಳೆವರೆಗೆ ಇಂಟರ್ನೆಟ್ ಹಾಗೂ ಎಸ್ಎಂಎಸ್ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ.
ಇನ್ನು ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಹಲವು ನಿರ್ಬಂಧ ವಿಧಿಸಿರೋದನ್ನ ಖಂಡಿಸಿ ಇಂದು ಗ್ರಾಮೀಣ ಭಾರತ ಬಂದ್ಗೆ ರೈತ ಸಂಘಗಳು ಕರೆ ನೀಡಿವೆ. ದೇಶವ್ಯಾಪಿ ಗ್ರಾಮಗ್ರಾಮಗಳಲ್ಲೂ ಬಂದ್ ಆಗಬೇಕು ಅಂತ ಕರೆ ನೀಡಿವೆ. ಬೆಳಗ್ಗೆಯಿಂದ ಸಂಜೆ 4ರವರೆಗೆ ಕರೆ ನೀಡಿವೆ. ದೇಶಾದ್ಯಂತ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಇನ್ನು ಕರ್ನಾಟಕದಲ್ಲೂ ರಸ್ತೆ ತಡೆ ನಡೆಸಲು ರೈತ ಸಂಘಟನೆಗಳು ಕರೆ ನೀಡಿವೆ.