ನವದೆಹಲಿ: ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿದ ʼಕ್ಯಾನ್ಸರ್ ಕ್ಯಾಪಿಟಲ್ ಭಾರತʼ ಎಂಬ ತಲೆಬರಹದ ವರದಿಯ ಪ್ರಕಾರ ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಇದು ಜಾಗತಿಕ ಸರಾಸರಿಯನ್ನೂ ಮೀರಿ ಬೆಳೆಯುತ್ತಿದೆ.
ದೇಶದ ಮೂರನೇ ಒಂದರಷ್ಟು ಜನ ಪ್ರಿ-ಡಯಾಬಿಟಿಕ್ ಆಗಿದ್ದು, ಹತ್ತರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಖಾಯಿಲೆ ಹಾಗು ಮಾನಸಿಕ ಅನಾರೋಗ್ಯಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಅತಿ ವೇಗವಾಗಿ ಹೆಚ್ಚುತ್ತಿದ್ದು, ದೇಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.