News Karnataka Kannada
Thursday, May 02 2024
ದೆಹಲಿ

ಕರ್ನಾಟಕದಿಂದ ಪಾಠ ಕಲಿಯಿತೇ ಬಿಜೆಪಿ: ಛತ್ತೀಸ್‌ಗಢ, ಮಧ್ಯಪ್ರದೇಶ ಚುನಾವಣೆಗೆ ಅಭ್ಯರ್ಥಿ ಘೋಷಣೆ

BJP high command has learnt lessons from Karnataka: Chhattisgarh, Madhya Pradesh candidates
Photo Credit : IANS

ನವದೆಹಲಿ: ಚುನಾವಣೆ ಘೋಷಣೆಗೆ ಮೊದಲೇ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದೆ. ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಪಕ್ಷ ಶತಾಯಗತಾಯ ಪ್ರಯತ್ನಿಸುತ್ತಿದೆ. ಅದೇ ರೀತಿ ಖನಿಜ ಸಂಪತ್ತಿನ ಬೀಡಾಗಿರುವ ಛತ್ತೀಸ್‌ಗಢದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪೂರ್ವತಯಾರಿ ನಡೆಸಿದ್ದು, ಮಧ್ಯಪ್ರದೇಶದಲ್ಲಿ 39 ಹಾಗೂ ಛತ್ತೀಸ್‌ಗಢದಲ್ಲಿ 21 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಪಕ್ಷದ ಅಧ್ಯಕ್ಷ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರು ಅನುಮೋದಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಮಧ್ಯಪ್ರದೇಶಕ್ಕೆ ಪಕ್ಷವು ಘೋಷಿಸಿದ ಹೆಸರುಗಳಲ್ಲಿ ಸರಳಾ ವಿಜೇಂದ್ರ ರಾವತ್, ಲಾಲ್ ಸಿಂಗ್ ಆರ್ಯ, ಪ್ರೀತಂ ಲೋಧಿ, ಪ್ರಿಯಾಂಕಾ ಮೀನಾ, ಲಲಿತಾ ಯಾದವ್, ಲಖನ್ ಪಟೇಲ್, ಭಾನು ಭೂರಿಯಾ ಮತ್ತು ಸತೀಶ್ ಮಾಳವಿಯಾ ಸೇರಿದ್ದಾರೆ.

ಛತ್ತೀಸ್‌ಗಢದ ಪಟ್ಟಿಯಲ್ಲಿ, ಭೂಲನ್ ಸಿಂಗ್ ಮರಾವಿ, ಲಕ್ಷ್ಮಿ ರಾಜವಾಡೆ, ಶಕುಂತಲಾ ಸಿಂಗ್ ಪೋರ್ಥೆ, ಇಂದ್ರಕುಮಾರ್ ಸಾಹು ಮತ್ತು ಗೀತಾ ಘಾಸಿ ಸಾಹು ಹೆಸರುಗಳಿವೆ. ಕಾಂಗ್ರೆಸ್ ಪಕ್ಷವು ಎರಡೂ ರಾಜ್ಯಗಳ ಚುನಾವಣಾ ಘಟಕಗಳೊಂದಿಗೆ ಸಭೆಗಳನ್ನು ನಡೆಸಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದಾಗಿ ಕಾಂಗ್ರೆಸ್‌ ಹೇಳಿದೆ. ಅಲ್ಲದೆ ಛತ್ತಿಸ್‌ ಗಢದಲ್ಲಿ ಮತ್ತೆ ಅಧಿಕಾರಕ್ಕೇರಲಿದ್ದೇವೆ ಎಂದು ಹೇಳಿದೆ. ಈ ವರ್ಷಾಂತ್ಯದಲ್ಲಿ ರಾಜಸ್ಥಾನದ ಜೊತೆಗೆ ಈ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು