ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ-20 ಶೃಂಗಸಭೆಗೆ ಕೆಲವೇ ದಿನಗಳು ಬಾಕಿ ಇವೆ. ಭಾರತದ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಯುತ್ತಿರುವ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಳ್ಳುವ ಕಾರಣದಿಂದಾಗಿ ದೆಹಲಿಯನ್ನು ಹಲವು ರೀತಿಯಲ್ಲಿ ಸಿಂಗರಿಸಲಾಗುತ್ತಿದೆ.
ಇದು ಈಗ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ಮಧ್ಯೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.
ದೆಹಲಿಯ ಧೌಲಾ ಕೌನ್ನಲ್ಲಿ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದಲ್ಲಿರುವ ಕಾರಂಜಿಗಳನ್ನು ಅಳವಡಿಸಲಾಗಿದೆ. ದೆಹಲಿ ಸರ್ಕಾರವು ಶಿವಲಿಂಗ ಆಕಾರದ ಕಾರಂಜಿಗಳನ್ನು ಅಳವಡಿಸಿದೆ ಎಂದು ಬಿಜೆಪಿ ಆರೋಪಿಸುವ ಜತೆಗೆ ಆಕ್ರೋಶ ವ್ಯಕ್ತಪಡಿಸಿದೆ.
‘ಶಿವಲಿಂಗವನ್ನು ಸಿಂಗರಿಸಲು ಬಳಸಲಾಗಿದೆ. ಅಷ್ಟಕ್ಕೂ ಧೌಲಾ ಕೌನ್ ಜ್ಞಾನವಾಪಿ ಅಲ್ಲ. ಆಪ್ ಸರ್ಕಾರ ನಡೆ ಅನುಸರಿಸಿರುವುದು ಸರಿಯಲ್ಲ’ ಎಂದು ಬಿಜೆಪಿಯ ಚಾರು ಪ್ರಜ್ಞಾ ಟೀಕಿಸಿದ್ದಾರೆ.
A Shivling is not for decoration. And Dhaula Kuan is not Gyanvapi.
AAP Govt in Delhi has installed Shivling shaped fountains at Dhaula Kuan. pic.twitter.com/A4J0SMspl7
— Charu Pragya🇮🇳 (Modi Ka Parivar) (@CharuPragya) August 30, 2023
ಬಿಜೆಪಿ ಆರೋಪ ಮಾಡಿದ ಬೆನ್ನಲ್ಲೇ ಆಪ್ ಸಂಸದ ಸಂಜಯ್ ಸಿಂಗ್ ತಿರುಗೇಟು ನೀಡಿದ್ದಾರೆ . ನರೇಂದ್ರ ಮೋದಿ ನೇತೃತ್ವದಲ್ಲಿಯೇ ಶಿವಲಿಂಗಗಳನ್ನು ಡೆಕೊರೇಷನ್ಗೆ ಬಳಸಿಕೊಳ್ಳಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.
मोदी जी के नेतृत्व में शिवलिंग का अपमान किया गया और बेशर्म भाजपाई मोदी की तारीफ़ कर रहे हैं।
दिल्ली के LG शिवलिंग का अनादर करके वाहवाही लूट रहे हैं।
BJP को देश से माफ़ी माँगनी चाहिये LG पर कार्यवाही करो। pic.twitter.com/72mjQ2cmz9— Sanjay Singh AAP (@SanjayAzadSln) August 31, 2023