ನವದೆಹಲಿ: ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಖಂಡಿಸಿದ್ದಾರೆ. “ನಾವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸುತ್ತೇವೆ, ಅನ್ಯದ್ವೇಷ, ವರ್ಣಭೇದ ನೀತಿಯನ್ನು ವಿರೋಧಿಸುತ್ತೇವೆ ಎಂದು ದೆಹಲಿ ಘೋಷಣೆ ಹೇಳಿದೆ.
ಭಯೋತ್ಪಾದನೆ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರವಾದ ಬೆದರಿಕೆಗಳಲ್ಲಿ ಒಂದಾಗಿದೆ. ನಿರ್ಣಾಯಕ ಇಂಧನ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯಗಳ ವಿರುದ್ಧ ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ನಿರ್ಣಯ ಹೇಳಿದೆ.
ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಬಗ್ಗೆಯೂ ಜಿ20 ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರಫ್ತು, ಆಮದು ನಿಯಂತ್ರಣಗಳು ಮತ್ತು ಪತ್ತೆಹಚ್ಚುವಿಕೆ ಸೇರಿದಂತೆ ಈ ವಿದ್ಯಮಾನಗಳನ್ನು ಎದುರಿಸಲು ರಾಷ್ಟ್ರಗಳ ನಡುವಿನ ಅಂತರರಾಷ್ಟ್ರೀಯ ಸಹಕಾರವು ನಿರ್ಣಾಯಕವಾಗಿದೆ. ಇದಕ್ಕಾಗಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಮತ್ತು FATF ಶೈಲಿಯ ಪ್ರಾದೇಶಿಕ ಸಂಸ್ಥೆಗಳ ಹೆಚ್ಚುತ್ತಿರುವ ಸಂಪನ್ಮೂಲ ಅಗತ್ಯಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ದೆಹಲಿ ಘೋಷಣೆ ಹೇಳಿದೆ.
ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಕ್ರಮ ಮನಿಲಾಂಡರಿಂಗ್ ಗೆ ಕಡಿವಾಣ ಹಾಕಲು ಎಲ್ಲ ದೇಶಗಳು ಬದ್ದರಾಗಿದ್ದೇವೆ. ಈ ನಿಟ್ಟಿನಲ್ಲಿ, “ಪ್ರಯಾಣ ನಿಯಮ” ಸೇರಿದಂತೆ ಅದರ ಮಾನದಂಡಗಳ ಜಾಗತಿಕ ಅನುಷ್ಠಾನವನ್ನು ವೇಗಗೊಳಿಸಲು FATF ನ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ ಮತ್ತು ವಿಕೇಂದ್ರೀಕೃತ ಹಣಕಾಸು (DeFi) ವ್ಯವಸ್ಥೆಗಳ ಕುರಿತು ಗಮನಹರಿಸುತ್ತೇವೆ ಎಂದು ಘೋಷಣೆ ಹೇಳಿದೆ.