ನವದೆಹಲಿ : ಕೋವಿಡ್-19 ಹೊಸ ಪ್ರಕರಣ ಭಾರತದಲ್ಲಿ ಶೇಕಡಾ 18ರಷ್ಟು ಇಳಿಕೆಯಾಗಿದ್ದು, ಕಳೆದ ಅಕ್ಟೋಬರ್ 11ರಿಂದ 17ರವರೆಗೆ ಒಂದು ವಾರದ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡ ಶೇಕಡಾ 13ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.
ಯುರೋಪ್ ಖಂಡದ ರಾಷ್ಟ್ರಗಳಲ್ಲಿ ಹೊರತುಪಡಿಸಿ ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಹೊಸ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಕಳೆದ 20 ತಿಂಗಳಿನಿಂದ ಕೋವಿಡ್ ಸೋಂಕು, ಸಾವಿನ ಸುದ್ದಿ ಓದಿ ನೊಂದು ಹೋದವರಿಗೆ ಸಿಹಿಸುದ್ದಿ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ನಿನ್ನೆ ಬಿಡುಗಡೆ ಮಾಡಿದ ಕೋವಿಡ್ -19 ಸಾಪ್ತಾಹಿಕ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಂಕಿಅಂಶದಲ್ಲಿ, ಕೇವಲ 2.7 ದಶಲಕ್ಷ ಹೊಸ ಪ್ರಕರಣಗಳು ಮತ್ತು 46 ಸಾವಿರ ಹೊಸ ಸಾವುಗಳು ಅಕ್ಟೋಬರ್ 11 ರಿಂದ 17 ರವರೆಗೆ ಒಂದು ವಾರದಲ್ಲಿ ವರದಿಯಾಗಿದೆ, ಜಾಗತಿಕ ಮಟ್ಟದಲ್ಲಿ ಕೋವಿಡ್-19 ಹೊಸ ಪ್ರಕರಣಗಳು ಮತ್ತು ಸಾವುಗಳು ಹಿಂದಿನ ವಾರದಷ್ಟೇ ಇದೆ.
ಜಗತ್ತಿನ ಯಾವ್ಯಾವ ದೇಶಗಳಲ್ಲಿ ಎಷ್ಟೆಷ್ಟು?:ಕಳೆದೊಂದು ವಾರದಲ್ಲಿ ಅತಿಹೆಚ್ಚು ಇಳಿಕೆ ಆಫ್ರಿಕನ್ ಪ್ರದೇಶದಿಂದ (18 ಪ್ರತಿಶತ), ಪಶ್ಚಿಮ ಪೆಸಿಫಿಕ್ ಪ್ರದೇಶದಿಂದ (16 ಪ್ರತಿಶತ) ವರದಿಯಾಗಿದೆ. ಆಫ್ರಿಕನ್ ದೇಶಗಳಲ್ಲಿ ಕಳೆದೊಂದು ವಾರದಲ್ಲಿ ಶೇಕಡಾ 25ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆಗ್ನೇಯ ಏಷ್ಯಾ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ 19 ಶೇಕಡಾ ಮತ್ತು 8 ಶೇಕಡಾ ಇಳಿಕೆಯಾಗಿದೆ.
ಜಾಗತಿಕವಾಗಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 240 ಮಿಲಿಯನ್ಗಿಂತ ಹೆಚ್ಚಾಗಿದೆ ಮತ್ತು ಒಟ್ಟು ಸಾವಿನ ಸಂಖ್ಯೆ 4.9 ಮಿಲಿಯನ್ಗಿಂತ ಕಡಿಮೆ ಇದೆ. ಹೊಸ ಕೊರೋನಾ ಪ್ರಕರಣಗಳು ಅಮರಿಕಾದಲ್ಲಿ ಅತಿಹೆಚ್ಚು (582,707 ಹೊಸ ಪ್ರಕರಣಗಳು; 11 ಪ್ರತಿಶತ ಇಳಿಕೆ), ಇಂಗ್ಲೆಂಡ್ (283,756 ಹೊಸ ಪ್ರಕರಣಗಳು; 14 ಶೇಕಡಾ ಹೆಚ್ಚಳ), ರಷ್ಯಾ (217,322 ಹೊಸ ಪ್ರಕರಣಗಳು; 15 ಶೇಕಡಾ ಹೆಚ್ಚಳ) , ಟರ್ಕಿ (213,981 ಹೊಸ ಪ್ರಕರಣಗಳು; ಹಿಂದಿನ ವಾರದಲ್ಲಿ ವರದಿಯಾದ ಸಂಖ್ಯೆಯಂತೆಯೇ) ಮತ್ತು ಭಾರತ (114,244 ಹೊಸ ಪ್ರಕರಣಗಳು; ಶೇ 18 ರಷ್ಟು ಇಳಿಕೆ) ವರದಿಯಾಗಿದೆ.
ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2 ಲಕ್ಷದ 15 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣಗಳು ಮತ್ತು 2,900 ಕ್ಕೂ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ, ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡಾ 13 ಮತ್ತು 19 ರಷ್ಟು ಕಡಿಮೆಯಾಗಿದೆ.
ಹಿಂದಿನ ವಾರಕ್ಕೆ ಹೋಲಿಸಿದರೆ ಥೈಲ್ಯಾಂಡ್ ಹೊರತುಪಡಿಸಿ ಈ ವಾರ ಎಲ್ಲಾ ದೇಶಗಳು ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಭಾರತವು ಅತಿ ಹೆಚ್ಚು ಹೊಸ ಪ್ರಕರಣಗಳನ್ನು 114,244 ಎಂದು ವರದಿ ಮಾಡಿದರೂ, ಅವು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡಾ 18 ರಷ್ಟು ಇಳಿಕೆಯಾಗಿವೆ. ಥೈಲ್ಯಾಂಡ್ (72,817 ಹೊಸ ಪ್ರಕರಣಗಳು) ಮತ್ತು ಮ್ಯಾನ್ಮಾರ್ (9202 ಹೊಸ ಪ್ರಕರಣಗಳು) ಕೂಡ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…