ದೆಹಲಿ : ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಪಲ್ಲಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಗ್ರ ದಾಳಿ ಆತಂಕದ ನಡುವೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಪ್ರಧಾನಮಂತ್ರಿಯವರು ನಾಳೆ ‘ಪಂಚಾಯತ್ ರಾಜ್ ದಿವಸ್’ ಸಂದರ್ಭದಲ್ಲಿ ದೇಶಾದ್ಯಂತದ ಪಂಚಾಯತ್ ಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.ಪ್ರತಿ ವರ್ಷ, ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾಗಿ ಆಚರಿಸಲಾಗುತ್ತದೆ.
ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದ 30,000 ಕ್ಕೂ ಹೆಚ್ಚು ಪಂಚಾಯತ್ ರಾಜ್ ಸಂಸ್ಥೆ (ಪಿಆರ್ಐ) ಸದಸ್ಯರನ್ನು ಒಳಗೊಂಡ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದು, ಪ್ರಧಾನಿಯವರ ಭಾಷಣಕ್ಕಾಗಿ ದೇಶಾದ್ಯಂತದ ಪಿಆರ್ಐಗಳನ್ನು ವರ್ಚುವಲ್ ಮೂಲಕ ಸಂಪರ್ಕಿಸಲಾಗುವುದು. ಪಲ್ಲಿ ಪಂಚಾಯತ್ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿದೆ.
ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದ 30,000 ಕ್ಕೂ ಹೆಚ್ಚು ಪಂಚಾಯತ್ ರಾಜ್ ಸಂಸ್ಥೆ (ಪಿಆರ್ಐ) ಸದಸ್ಯರನ್ನು ಒಳಗೊಂಡ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದು, ಪ್ರಧಾನಿಯವರ ಭಾಷಣಕ್ಕಾಗಿ ದೇಶಾದ್ಯಂತದ ಪಿಆರ್ಐಗಳನ್ನು ವರ್ಚುವಲ್ ಮೂಲಕ ಸಂಪರ್ಕಿಸಲಾಗುವುದು. ಪಲ್ಲಿ ಪಂಚಾಯತ್ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿದೆ.