Categories: ದೇಶ

ಇಬ್ಬರು ಮಕ್ಕಳಿಗೆ ಕೋಟಿ ಷೇರುಗಳ ದಾನ ಮಾಡಿದ ಅಜೀಮ್ ಪ್ರೇಮ್​ಜಿ

ನವದೆಹಲಿ: ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಎಚ್ ಪ್ರೇಮ್​ಜಿ ಭಾರತದ ಅತಿದೊಡ್ಡ ದಾನವಂತರಲ್ಲಿ ಒಬ್ಬರು. ತಮ್ಮ ಸಂಪಾದನೆಯ ಬಹುಭಾಗವನ್ನು ಅವರು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಇದೀಗ ಅವರು ತಮ್ಮ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನವಾಗಿ ವರ್ಗಾಯಿಸಿದ್ದಾರೆ.

ಎನ್​ಎಸ್​ಇ ಸಲ್ಲಿಸಿದ ಫೈಲಿಂಗ್​ನಲ್ಲಿ ವಿಪ್ರೋ ಈ ಮಾಹಿತಿ ನೀಡಿದೆ. ಅದರ ಪ್ರಕಾರ ಅಜೀಮ್ ಪ್ರೇಮ್​ಜಿ ತಮಗೆ ಸೇರಿದ ಷೇರುಪಾಲಿನ ಪೈಕಿ 1,02,30,180 (ಸುಮಾರು 1 ಕೋಟಿ) ಷೇರುಗಳನ್ನು ತಮ್ಮಿಬ್ಬರು ಮಕ್ಕಳಾದ ರಿಷದ್ ಪ್ರೇಮ್​ಜಿ ಮತ್ತು ತಾರಿಖ್ ಪ್ರೇಮ್​ಜಿ ಅವರಿಗೆ ದಾನವಾಗಿ ನೀಡಿದ್ದಾರೆ.

ಅಜೀಮ್ ಪ್ರೇಮ್​ಜಿ ತಮ್ಮ ಇಬ್ಬರೂ ಮಕ್ಕಳಿಗೆ ಸಮಾನವಾಗಿ, ಅಂದರೆ ತಲಾ 51,15,090 ಈಕ್ವಿಟಿ ಷೇರುಗಳನ್ನು ನೀಡಿದ್ದಾರೆ. ಸದ್ಯ ಒಂದು ಷೇರಿನ ಮೌಲ್ಯ 468 ರೂನಿಂದ 479 ರೂವರೆಗೆ ಇದೆ. ಒಟ್ಟು ಮೌಲ್ಯ 480 ಕೋಟಿ ರೂ ಆಸುಪಾಸು ಇದೆ.

ಇನ್ನು ಅಜೀಮ್ ಪ್ರೇಮ್​ಜಿ ಅವರ ಹಿರಿಯ ಮಗ ರಿಷದ್ ಪ್ರೇಮ್​ಜಿ ಇತ್ತೀಚೆಗಷ್ಟೇ ವಿಪ್ರೋ ಛೇರ್ಮನ್ ಆಗಿ ನೇಮಕವಾಗಿದ್ದಾರೆ. ಕಿರಿಯ ಮಗ ತಾರಿಕ್ ಪ್ರೇಮ್​ಜಿ ಅವರು ವಿಪ್ರೋದ ದಾನದತ್ತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಇನ್ನು ಅಜೀಮ್ ಪ್ರೇಮ್​ಜಿ ಅವರು ಫಿಲಾಂತ್ರೋಫಿಗೆ ಅಥವಾ ದಾನ ದತ್ತಿಗಳಿಗೆ ಹೆಚ್ಚು ಹಣ ನೀಡುತ್ತಾರೆ. ಉದಾರ ದಾನಗಳಿಗೆ ಹೆಸರುವಾಸಿ. ಭಾರತದಲ್ಲಿ ಅತಿದೊಡ್ಡ ಫಿಲಾಂತ್ರೋಫಿಸ್ಟ್​ಗಳಲ್ಲಿ ಅವರೂ ಒಬ್ಬರು. ಇವರ ದಾನ ಧರ್ಮ ಕಾರ್ಯಗಳ ಹಿಂದಿನ ರೂವಾರಿ ಅವರ ಎರಡನೇ ಮಗ ತಾರೀಖ್ ಪ್ರೇಮ್​ಜಿ ಅವರೆಯೇ. ಅಜೀಮ್ ಪ್ರೇಮ್​ಜಿ ಫೌಂಡೇಶನ್​ನಲ್ಲಿದ್ದಾರೆ ಇವರು.

 

 

Ashitha S

Recent Posts

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ ಎಟಿಎಸ್

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

5 mins ago

ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು; ಆದರೆ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಗುವಿನ…

9 mins ago

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

20 mins ago

ಪಡೀಲಿನಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿ !

ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ…

25 mins ago

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ಬಿಗ್ ರಿಲೀಫ್

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ…

46 mins ago

ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದ ರೈತನಿಗೆ ವಂಚಿಸಿದ ಅಪರಿಚಿತ

ಜಿಲ್ಲೆಯ ಹನೂರು ಪಟ್ಟಣದ ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದು ಕೇಳಿದ ರೈತನಿಗೆ ಕೀಡಿಗೇಡಿಯೋರ್ವ ವಂಚಿಸಿ ಹಣ ಲಪಾಟಿಸಿರುವ ಘಟನೆ…

47 mins ago