ಆಂಧ್ರಪ್ರದೇಶ: ಸಿಂಹದ ಜೊತೆ ಸೆಲ್ಫಿ ತೆಗೆಯಲು ಹೋದ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಝೂಲಾಜಿಕಲ್ ಪಾರ್ಕ್ನಲ್ಲಿ ನಡೆದಿದೆ.
ಅಮಲೇರಿದ ಸ್ಥಿತಿಯಲ್ಲಿದ್ದ ಪ್ರಹ್ಲಾದ್ ಗುಲ್ಜಾರ್ ಸಿಂಹದ ಜೊತೆ ಸೆಲ್ಫಿ ತೆಗೆದುಕೊಳ್ಳಲು ಸಿಂಹಕ್ಕೆ ಮೀಸಲಾದ ಆವರಣವನ್ನು ಪ್ರವೇಶಿಸಿದ್ದಾರೆ. ಈ ಆವರಣವು ಮೃಗಾಲಯದ ಅಧಿಕಾರಿಗಳು ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಸ್ಥಳವಾಗಿತ್ತು, ಸಿಂಹದ ಬಳಿ ಹೋಗಲು ಗುಲ್ಜಾರ್ ಕೊನೆಯ ಗೇಟ್ ಕೂಡ ದಾಟಿದ್ದರು.
ಪ್ರಾಣ ಉಳಿಸಿಕೊಳ್ಳಲು ಪಕ್ಕದಲ್ಲಿದ್ದ ಮರವನ್ನು ಹತ್ತಿದ್ದರು ಆದರೆ ಭಯದಿಂದ ಮರದಿಂದ ಬಿದ್ದ ಕೆಲವೇ ನಿಮಿಷಗಳಲ್ಲಿ ಸಿಂಹ ದಾಳಿ ಮಾಡಿತು. ಸಿಂಹ ಆತನನ್ನು ಶರ್ಟ್ ಮತ್ತು ಪ್ಯಾಂಟ್ ಸಹಾಯದಿಂದ ಮೇಲಕ್ಕೆಳೆದು ಕುತ್ತಿಗೆಗೆ ದಾಳಿ ಮಾಡಿತ್ತು.
ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.