ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಭೋಗೊಲೆ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.ಸಂತ್ರಸ್ತರು ನೀಲಗಿರಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಹೊಲದಲ್ಲಿನ ಟೆಂಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕಾಕಿನಾಡ ಜಿಲ್ಲೆಯ ಅಣ್ಣಾವರಂನಿಂದ ಕೆಲಸದ ನಿಮಿತ್ತ ಬಂದಿದ್ದರು.
ಗಾಯಾಳುಗಳನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗಾಗಿ ವಿಜಯವಾಡಕ್ಕೆ ರವಾನಿಸಲಾಗಿದೆ.
ಮೃತರನ್ನು ಕೊಂಡಬಾಬು (35), ರಾಜು (28), ಧರ್ಮರಾಜು (25) ಮತ್ತು ವೇಣು (19) ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಲ್ಲೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಣೇಶ್, ಅರ್ಜುನ್ ಮತ್ತು ಬುಳ್ಳಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.