News Karnataka Kannada
Thursday, May 02 2024
ಆಂಧ್ರಪ್ರದೇಶ

ನಾಯಿಯ ಅಂತ್ಯಸಂಸ್ಕಾರ: ಇಡೀ ಊರೇ ಸ್ಪಂದನೆ

ಮಾನವ ಹಿಂದಿನ ಕಾಲದಿಂದಲೂ ಕೆಲವು ಸರಳ ಪ್ರಾಣಿಗಳೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾನೆ. ಅದರಲ್ಲೂ ಹೆಚ್ಚು ವಿಶ್ವಾಸಕ್ಕೆ ಹೆಸರಾದ ಪ್ರಾಣಿ ನಾಯಿ. ಅದರ ಪ್ರೀತಿ-ವಿಶ್ವಾಸಕ್ಕೆ ಮಾರುಹೋಗಿ ಅನೇಕರು ನಾಯಿಯ ಜನ್ಮದಿನದ ಆಚರಣೆ ಮತ್ತು ಅಂತ್ಯಕ್ರಿಯೆಗಳನ್ನು ಸಹ ನಡೆಸುತ್ತಾರೆ. ಇಂತಹದ್ದೇ ಘಟನೆಯೊಂದು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
Photo Credit : NewsKarnataka

ಆಂಧ್ರಪ್ರದೇಶ​: ಮಾನವ ಹಿಂದಿನ ಕಾಲದಿಂದಲೂ ಕೆಲವು ಸರಳ ಪ್ರಾಣಿಗಳೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾನೆ. ಅದರಲ್ಲೂ ಹೆಚ್ಚು ವಿಶ್ವಾಸಕ್ಕೆ ಹೆಸರಾದ ಪ್ರಾಣಿ ನಾಯಿ. ಅದರ ಪ್ರೀತಿ-ವಿಶ್ವಾಸಕ್ಕೆ ಮಾರುಹೋಗಿ ಅನೇಕರು ನಾಯಿಯ ಜನ್ಮದಿನದ ಆಚರಣೆ ಮತ್ತು ಅಂತ್ಯಕ್ರಿಯೆಗಳನ್ನು ಸಹ ನಡೆಸುತ್ತಾರೆ. ಇಂತಹದ್ದೇ ಘಟನೆಯೊಂದು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಪೆಂಟಪಲ್ಲಿಯಲ್ಲಿ ಪೆನುಗುಲ ರವೀಂದ್ರ ಮತ್ತು ಬೇಬಿ ಕುಟುಂಬದವರು ಪ್ರೀತಿಯಿಂದ ಸಾಕುತ್ತಿದ್ದ ಆರು ವರ್ಷದ ಭೀಮ್ ಎಂಬ ನಾಯಿ ಸಾವನ್ನಪ್ಪಿದ್ದು, ಇದರಿಂದ ಕುಟುಂಬಸ್ಥರು ಏಕಾಎಕಿ ಶೋಕಸಾಗರದಲ್ಲಿ ಮುಳುಗಿದ್ದಾರೆ.

ಭೀಮ ನಾಯಿ ಅಂತ್ಯಸಂಸ್ಕಾರವನ್ನು ಈ ಕುಟುಂಬ ಮಾನವನ ಮೃತದೇಹಕ್ಕೆ ನೆರವೇರಿಸುವ ಮಾದರಿಯಲ್ಲೇ ಮಾಡಲಾಯಿತು. ಚಿತೆಯಲ್ಲಿ ಸುಡಲಾಯಿತು. ಕುಟುಂಬಸ್ಥರು, ಪುಟಾಣಿಗಳು ಹಾಗೂ ಗ್ರಾಮಸ್ಥರೆಲ್ಲ ಸೇರಿ ನಾಯಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ನಾಯಿ ಮೃತದೇಹವನ್ನು ಹೂವುಗಳೊಂದಿಗೆ ಅಲಂಕರಿಸಿ ಹೊತ್ತು ತರುವಾಗ ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸ್ಮಶಾನಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.

ಇನ್ನೆರಡು ದಿನಗಳಲ್ಲಿ ಭೀಮನ ತಿಥಿ(ಪುಣ್ಯಸ್ಮರಣೆ) ನಡೆಸುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಕೂಡ ಭೀಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು