ಅಮರಾವತಿ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಚಿತ್ತೂರು-ಕಡಪಾ ರಾಷ್ಟ್ರೀಯ ಹೆದ್ದಾರಿಯ ರಾಮಪುರಂ ಮಂಡಲದ ಕೊಥಪಲ್ಲಿ ಕ್ರಾಸ್ ಬಳಿ ಭಾನುವಾರ ಮುಂಜಾನೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ಕಡಪದಲ್ಲಿರುವ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ಗೆ ಸ್ಥಳಾಂತರಿಸಿದ್ದಾರೆ.
ಮೃತರನ್ನು ಲಕ್ಷ್ಮಮ್ಮ (65), ಚಿನ್ನಕ್ಕ (60), ನರಸಯ್ಯ (41) ಮತ್ತು ಕಾರು ಚಾಲಕ ರಾಜಾ ರೆಡ್ಡಿ (35) ಎಂದು ಗುರುತಿಸಲಾಗಿದೆ.
ಲಕ್ಷ್ಮಮ್ಮ, ಅವರ ಮಗ ನರಸಯ್ಯ ಮತ್ತು ಚಾಲಕ ರಾಜಾರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿನ್ನಕ್ಕ ಮತ್ತು ಹರ್ಷವರ್ಧನ್ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿನ್ನಕ ಅವರು ರಿಮ್ಸ್ ಕಡಪದಲ್ಲಿ ನಿಧನರಾದರು.
ರಾಯಚೋಟಿಯಿಂದ ಕಡಪಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಕಡಪಕ್ಕೆ ದಾಖಲಿಸಲಾಗಿದೆ.