ತಿರುಪತಿ(ಆಂಧ್ರ ಪ್ರದೇಶ): ಟೆಕ್ಕಿಯೊಬ್ಬ ತನ್ನ ಪತ್ನಿಯನ್ನು ಕೊಂದು ಸೂಟ್ಕೇಸ್ನಲ್ಲಿ ಶವ ತುಂಬಿ ಕೆರೆಗೆ ಎಸೆದಿರುವ ಘಟನೆ ದೇವಸ್ಥಾನಗಳ ನಗರಿ ಆಂಧ್ರದ ತಿರುಪತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ಐದು ತಿಂಗಳ ಹಿಂದೆ ಟೆಕ್ಕಿ ತನ್ನ ಪತ್ನಿಯ ಕೊಂದು ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದಿದ್ದನು. ಈ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಪದ್ಮಾ ಎಂದು ಗುರುತಿಸಲಾಗಿದೆ. ಆಕೆಯ ಆರೋಪಿ ಪತಿಯನ್ನು ವೇಣುಗೋಪಾಲ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಹೈದರಾಬಾದ್ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಪಟ್ಟಣದ ಹೊರವಲಯದಲ್ಲಿರುವ ವೆಂಕಟಾಪುರದ ಕೆರೆಯಲ್ಲಿ ಪದ್ಮಾ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೇಣುಗೋಪಾಲ್ ಪದ್ಮಾಳನ್ನು ಏಪ್ರಿಲ್ 2019 ರಲ್ಲಿ ವಿವಾಹವಾದರು. ಮದುವೆಯ ನಂತರ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದರು ಅಲ್ಲಿ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಕೆಲವು ತಿಂಗಳ ನಂತರ, ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬೆಳೆದ ಕಾರಣ ಪದ್ಮಾ ತನ್ನ ಹೆತ್ತವರ ಮನೆಯಲ್ಲೇ ಕಳೆದ ಎರಡು ವರ್ಷಗಳಿಂದ ಇದ್ದಳು.
ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವೇಣುಗೋಪಾಲ್, ಈ ಹಿಂದೆ ನಡೆದಿದ್ದೆಲ್ಲವನ್ನೂ ಮರೆಯಲು ಬಯಸುತ್ತೇನೆ. ನೀನು ಎಂದಿಗೂ ನನ್ನೊಂದಿಗೆ ಇರು ಎಂದು ಪೋಷಕರಿಗೆ ಹೇಳಿ, ನಾವು ಹೈದರಾಬಾದ್ನಲ್ಲಿ ಒಟ್ಟಿಗೆ ಅಲ್ಲೇ ವಾಸವಿರುತ್ತೇವೆ ಎಂದು ಹೇಳಿ ಜನವರಿ 5 ರಂದು ಪದ್ಮಾಳನ್ನು ಮರಳಿ ಮನೆಗೆ ಕರೆತಂದಿದ್ದನು.
ನಂತರ, ಪದ್ಮಾ ಪೋಷಕರು ಕರೆ ಮಾಡಿದರೂ ಆಕೆ ಮಾತನಾಡಿತ್ತಿರಲಿಲ್ಲ. ಪದ್ಮಾ ತನ್ನೊಂದಿಗೆ ಹೈದರಾಬಾದ್ನಲ್ಲಿದ್ದಾಳೆ ಎಂದು ಟೆಕ್ಕಿ ತನ್ನ ಅತ್ತೆಯವರಿಗೆ ದಾರಿ ತಪ್ಪಿಸುತ್ತಿದ್ದನಂತೆ. ಸುಮಾರು ಐದು ತಿಂಗಳಿನಿಂದ ಆಕೆ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡದ ಕಾರಣ, ಪದ್ಮಾ ಅವರ ಪೋಷಕರು ಅನುಮಾನಗೊಂಡು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ, ವೇಣುಗೋಪಾಲ್ ಮೊದಲ ದಿನದಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಪದ್ಮಾ ಸಂಬಂಧಿಕರು ಆರೋಪಿಸಿದ್ದಾರೆ.
ವಿಚಾರಣೆ ವೇಳೆ, ವೇಣುಗೋಪಾಲ್ ಜನವರಿ 5 ರಂದು ಮನೆಗೆ ಬಂದ ದಿನವೇ ಆಕೆಗೆ ದೊಣ್ಣೆಯಿಂದ ಥಳಿಸಿದ್ದು, ಆಕೆಯನ್ನು ಕೊಂದಿದ್ದಾನೆ. ನಂತರ, ವೇಣುಗೋಪಾಲ್ ಅವರ ಪೋಷಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಶವವನ್ನು ಕಟ್ಟಿ ದೊಡ್ಡ ಸೂಟ್ಕೇಸ್ನಲ್ಲಿ ತುಂಬಿ ಅದನ್ನು ಕೆರೆಗೆ ಎಸೆದಿದ್ದಾನೆ. ಇನ್ನೂ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ.