ನವದೆಹಲಿ: ದೇಶದ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ಯೋಚಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
ಸಂದರ್ಶನ ಒಂದ ರಲ್ಲಿ ಮಾತನಾಡಿದ ಸಚಿವರು, ಹೆಚ್ಚಿನ ವೇಗದಿಂದ ಅಪಘಾತಗಳು ಉಂಟಾಗುತ್ತವೆ ಎಂಬ ಗ್ರಹಿಕೆ ಇರುವುದರಿಂದ ಇನ್ನೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದರು.
ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೇಗದ ಮಿತಿಯನ್ನು ನಿರ್ಬಂಧಿಸುವ ವಿವಿಧ ನ್ಯಾಯಾಲಯದ ನಿರ್ಧಾರಗಳಿವೆ. ಆದರೆ, ಈಗ ವೇಗದ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ನಿರ್ಧರಿಸಿದ್ದೇವೆ ಎಂದರು .