ಮುಂಬೈ : ಸೌದಿ ಅರೇಬಿಯಾದಲ್ಲಿ ಮೋಸಕ್ಕೊಳಗಾಗಿ ನಾಯಾ ಪೈಸೆ ಕೈಯಲ್ಲಿಲ್ಲದೆ ಇಂದು ಮುಂಜಾನೆ ಮುಂಬಯಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮಂಗಳೂರು ತೊಕ್ಕೊಟ್ಟು ಮೂಲದ ಮೊಹಮ್ಮದ್ ಸೌಬನ್ಎಂಬ ಯುವಕ ಪರದಾಡಾಬೇಕಾಯಿತು . ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳು ದಿಕ್ಕು ತಪ್ಪಿಸಿ ಕ್ವಾರೈಂಟಯ್ನ್ ನೆಪಹೊತ್ತು ಈತನಿಗೆ ಹೋಟೇಲ್ ಒಂದರ ಕೊಠಡಿಯಲ್ಲಿ ಕೂಡಿಹಾಕಿದ್ದರು . ಯುವಕನಲ್ಲಿ ಭಾರತೀಯ ಮೊಬೈಲ್ ಸಂಖ್ಯೆ, ಸ್ಥಳೀಯ ಫೋನ್ ಇಲ್ಲದಿರುವುದರಿಂದ ಪರಿಸ್ಥಿತಿ ದಾರುಣ ವಾಯಿತು.
ಕೊನೆಗೂ ಮಂಗಳೂರಿನಲ್ಲಿರುವ ಮಿತ್ರ ಸೂರಜ್ ನನ್ನು ಸಂಪರ್ಕಿಸಿ ತನ್ನ ಪರಿಸ್ಥಿಯ ಬಗ್ಗೆ ವಿವರಿಸಿದ್ದಾನೆ. ಸೂರಜ್ ಅವರು ರೆಡಿಯೋ ಜಾಕಿ ಆರ್.ಜೆ ಏರಲ್ ಮುಂಬೈ ಪತ್ರಕರ್ತರನ್ನು ಸಂಪರ್ಕಿಸಿದ ಅರ್ಧ ತಾಸಲ್ಲೇ ಮೊಹಮ್ಮದ್ ಉಳಿದುಕೊಂಡಿದ್ದ ರೂಮ್ ಗೆ ತಲುಪಿ ಸೌಬನ್ ಗೆ ಸ್ಪಂದಿಸಿ ರೂಮ್ ನಿಂದ ಬಿಡಿಸಿ ಮಂಗಳೂರುಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದರು.
ಮುಂಬಯಿ ಪ್ರದೇಶ ಕಾಂಗ್ರೇಸ್ ಸಮಿತಿ (ಎಂಆರ್ ಸಿಸಿ) ಅಂಧೇರಿ ಜಿಲ್ಲಾ ಅಧ್ಯಕ್ಷ ಕ್ಲೈವ್ ಡಾಯಸ್ (ಬಾರ್ಕೂರು), ಸಮಾಜ ಸೇವಕರಾದ ತೋನ್ಸೆ ಸಂಜೀವ ಪೂಜಾರಿ, ಅನಿಲ್ ಅಲ್ಮೇಡಾ ಬ್ರಹ್ಮವಾರ, ಕೆನರಾ ಪಿಂಟೋ ಮಾಲಿಕ ಶ್ರೀ ಸುನೀಲ್ ಪಾಯ್ಸ್, ವ್ಯವಸ್ಥಾಪಕ ಮಧುಕರ್ ಸುವರ್ಣ ಇವರು ಸಹಯೋಗವನ್ನು ನೀಡಿದ್ದರು.