ಕೇರಳ : ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ವಿಫುಲವಾದ ಸಾಧ್ಯತೆಗಳಿಗೆ ನಿಯೋಗವಾಗಿ ವಿಯೆಟ್ನಾಂ ಸಂಘದ ಕೇರಳ ಭೇಟಿ. ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಕೇರಳವನ್ನು ಹೋಲುವ ವಿಯೆಟ್ನಾಂ ಈ ರಂಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಮುಂದಿದೆ. ಈ ಅನುಭವ ಮತ್ತು ತಂತ್ರಜ್ಞಾನವನ್ನು ಕೇರಳಕ್ಕೆ ವರ್ಗಾಯಿಸುವುದು ರಾಜ್ಯಕ್ಕೆ ಪ್ರಯೋಜನ ಕಾರಿಯಾಗಿದೆ. ಅದೇ ಸಮಯದಲ್ಲಿ, ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ನಮ್ಮ ಪ್ರಗತಿಯ ಲಾಭವನ್ನು ವಿಯೆಟ್ನಾಂಗೂ ಪಡೆಯಬಹುದು.
ಭಾರತದಲ್ಲಿನ ವಿಯೆಟ್ನಾಂ ರಾಯಭಾರಿ ಫಾಮ್ ಸಾಂಗ್ ಚು ನೇತೃತ್ವದ ಆರು ಸದಸ್ಯರನ್ನೊಳಗೊಂಡ ಸಂಘ ನಡೆಸಿದ ಕೇರಳ ಭೇಟಿಯ ಸಂದರ್ಭದಲ್ಲಿ, ಈ ಕ್ಷೇತ್ರದ ಭವಿಷ್ಯದ ಸಾಧ್ಯತೆಗಳ ಬಗ್ಗೆ ವ್ಯಾಪಕವಾದ ಚರ್ಚೆ ಮತ್ತು ಅಭಿಪ್ರಾಯಗಳ ವಿನಿಮಯ ನಡೆಯಿತು.
ನವೆಂಬರ್ 9 ರಂದು ತಿರುವನಂತಪುರಂನ ಮಸ್ಕತ್ ಹೋಟೆಲ್ನಲ್ಲಿ ನಡೆದ ಕೇರಳ-ವಿಯೆಟ್ನಾಂ ಸಹಕಾರ ಕಾರ್ಯಾಗಾರ ಚರ್ಚೆಗಳ ಮುಖ್ಯ ವೇದಿಕೆಯಾಗಿದೆ. ಉಭಯ ಪ್ರದೇಶಗಳು ಸಹಕರಿಸಬಹುದಾದ ಕೃಷಿ, ಮೀನುಗಾರಿಕೆ, ಉನ್ನತ ಶಿಕ್ಷಣ, ಐಟಿ ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳ ಸಚಿವರು, ತಜ್ಞರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ವಿಸ್ತೃತ ಚರ್ಚೆಗಳು ನಡೆದವು. ಈ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವು ವಿಶಾಲವಾದ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಭತ್ತ, ಮೆಣಸು, ಕಾಫಿ, ರಬ್ಬರ್ ಮತ್ತು ಗೋಡಂಬಿ ಮುಂತಾದ ಕ್ಷೇತ್ರಗಳಲ್ಲಿ ವಿಯೆಟ್ನಾಂ ಅತ್ಯುತ್ತಮ ರೀತಿಗಳು ಮತ್ತು ಉತ್ಪಾದಕತೆಯನ್ನು ಅಭಿವೃದ್ಧಿಪಡಿಸಿದೆ ಎಂದು ಮುಖ್ಯಮಂತ್ರಿ ಸೂಚಿಸಿದರು. ಇದು ಸಮುದ್ರುತ್ಪಾದನೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಲ್ಲಿಯೂ ಉತ್ತಮವಾಗಿದೆ. ಈ ಸಾಧನೆಯನ್ನು ಹೇಗೆ ಸಾಧಿಸಲಾಗಿದೆ ಎಂಬುದರ ಕುರಿತಾದ ಮಾಹಿತಿಯನ್ನು ವಿನಿಮಯವು ಕ್ಷೇತ್ರಗಳ ಭವಿಷ್ಯದ ಅಭಿವೃದ್ಧಿಯಲ್ಲಿ ಕೇರಳಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದರೊಂದಿಗೆ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕೇರಳವು ವಿಯೆಟ್ನಾಂಗೆ ಅತ್ಯುತ್ತಮ ಬೆಂಬಲವನ್ನು ನೀಡಲು ಸಾಧ್ಯವಾಗುತ್ತದೆ. ಡಿಜಿಟಲ್ ಶಿಕ್ಷಣ ಮತ್ತು ಆನ್ಲೈನ್ ಕಲಿಕೆಯ ಕ್ಷೇತ್ರದಲ್ಲಿಯೂ ಸಹಾಯವನ್ನು ಒದಗಿಸಬಹುದು.ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾದ ವಿಯೆಟ್ನಾಂನಿಂದ ಕೇರಳಕ್ಕೆ ಬಂದ ಜನರನ್ನು ಮುಖ್ಯಮಂತ್ರಿಗಳು ಸ್ವಾಗತಿಸಿದರು. ವಿಯೆಟ್ನಾಂನೊಂದಿಗೆ ಸಹೋದರಿ ನಗರ ಸಂಬಂಧಗಳನ್ನು ವಿಸ್ತರಿಸುವ ಕಲ್ಪನೆಯು ತುಂಬಾ ಉಪಯುಕ್ತವಾಗಿದೆ. ತಜ್ಞರ ಭೇಟಿ ಮತ್ತು ವೆಬಿನಾರ್ಗಳ ಮೂಲಕ ಈ ಸಂಬಂಧವನ್ನು ಬಲಪಡಿಸಲಾಗುವುದು. ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಜಂಟಿ ಕಾರ್ಯ ಗುಂಪುಗಳ ರಚನೆಯು ಎರಡು ಪ್ರದೇಶಗಳ ನಡುವಿನ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ವಿಯೆಟ್ನಾಂನ ಕೀಯನ್ ಪ್ರಾಂತ್ಯ ಮತ್ತು ಕ್ಯಾಂಥೋ ಸಿಟಿಯ ಪ್ರಾಂತ್ಯಗಳು ಕೃಷಿಯ ವಿಷಯದಲ್ಲಿ ಕೇರಳವನ್ನು ಹೋಲುವ ಪ್ರದೇಶಗಳಾಗಿವೆ. ಭತ್ತ, ಮೆಣಸು, ಕಾಫಿ, ರಬ್ಬರ್ ಮತ್ತು ಗೋಡಂಬಿ ಮುಂತಾದ ಕೃಷಿಯಲ್ಲಿ ಉತ್ತಮ ಅಭ್ಯಾಸಗಳು ಮತ್ತು ತಂತ್ರಗಳನ್ನು ಇಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ವಿಯೆಟ್ನಾಂ ಜತೆಗಿನ ಸಹಕಾರ ಕೇರಳದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ ಎಂದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಕೃಷಿ ಸಚಿವ ಪಿ.ಪ್ರಸಾದ್ ಹೇಳಿದರು. ಕೃಷಿ ಕ್ಷೇತ್ರದಲ್ಲಿ ಕೇರಳ ಎದುರಿಸುತ್ತಿರುವ ಸಮಸ್ಯೆಗಳನ್ನು ವಿಯೆಟ್ನಾಂ ಕೂಡ ಎದುರಿಸುತ್ತಿದೆ.ಈ ನಿಟ್ಟಿನಲ್ಲಿ ಸೂಕ್ತ ಸಂಶೋಧನೆ ನಡೆದರೆ ಈ ಭಾಗದ ಅಭಿವೃದ್ಧಿ ಹಾಗೂ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಮೀನುಗಾರಿಕಾ ಸಚಿವ ಸಜಿ ಚೆರಿಯನ್ ಮಾತನಾಡಿ, ವಿಯೆಟ್ನಾಂನ ಒಳನಾಡು ಮೀನುಗಾರಿಕೆ, ಸಮುದ್ರ ಉತ್ಪಾದನೆ ಮತ್ತು ವಿತರಣೆ,ವಿಯೆಟ್ನಾಂನ ಅನುಭವ ವಿನಿಮಯ ಮತ್ತು ತಂತ್ರಜ್ಞಾನದ ವಿನಿಮಯದಲ್ಲಿ ಕೇರಳಕ್ಕೆ ಅನುಕೂಲವಾಗುವಂತೆ ಈ ಸಭೆಯು ಪ್ರಗತಿಗೆ ದಾರಿ ಮಾಡಿಕೊಡಲಿದೆ ಎಂದರು.
ಗ್ರಾಹಕ ರಾಜ್ಯವಾಗಿಯೂ ಮತ್ತು ಉತ್ತಮ ಹೂಡಿಕೆ ಸೌಹಾರ್ದ ರಾಜ್ಯವಾಗಿಯೂ ಕೇರಳದೊಂದಿಗೆ ವಿಯೆಟ್ನಾಂಗೆ ಉತ್ತಮ ವ್ಯಾಪಾರ ಸಂಬಂಧ ಸಾಧ್ಯ ಎಂದು ವ್ಯವಸಾಯ ಸಚಿವ ಪಿ.ರಾಜೀವ್ ಸೂಚಿಸಿದರು.ಕೇರಳದ ಚಿಲ್ಲರೆ ವ್ಯಾಪಾರ ಕ್ಷೇತ್ರವು ವಿಯೆಟ್ನಾಂ ಬೆಳವಣಿಗೆಗಳ ಪರವಾಗಿದೆ. ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳ ವಲಯಗಳಲ್ಲಿ ಜಂಟಿ ಉದ್ಯಮಗಳು ಸಹ ಸಾಧ್ಯವಿದೆ. ರಾಜ್ಯದ ಅತ್ಯುತ್ತಮ ಮಾನವ ಸಂಪನ್ಮೂಲ ಸಾಮರ್ಥ್ಯ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ತ್ವರಿತ ಕ್ಲಿಯರೆನ್ಸ್ ವ್ಯವಸ್ಥೆ ಮತ್ತು ಜವಾಬ್ದಾರಿಯುತ ಹೂಡಿಕೆ ನೀತಿಯು ಅತ್ಯುತ್ತಮವಾದುದು ಎಂದು ಅವರು ಅದನ್ನು ಸೂಚಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಯೆಟ್ನಾಂ ರಾಯಭಾರಿ ಫಾಮ್ ಸಾಂಗ್ ಚು ಮಾತನಾಡಿ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಕೇರಳದೊಂದಿಗೆ ವ್ಯಾಪಕ ಸಹಕಾರ ಸಾಧ್ಯ. ವಿಯೆಟ್ನಾಂ ಭೇಟಿಯ ಸಮಯದಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ತಕ್ಷಣದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೇರಳದ ಪರಂಪರೆ ಮತ್ತು ಪ್ರಗತಿಯನ್ನು ಬಳಸಿಕೊಳ್ಳಬಹುದು ಎಂದು ಅವರು ಸೂಚಿಸಿದರು.
ಸಚಿವರ ಜೊತೆಗೆ ಯೋಜನಾ ಮಂಡಳಿಯ ಉಪಾಧ್ಯಕ್ಷ ಪ್ರೊ. ವಿ.ಕೆ. ರಾಮಚಂದ್ರನ್, ಮುಖ್ಯ ಕಾರ್ಯದರ್ಶಿ ಡಾ. ವಿ.ಪಿ ಜಾಯ್, ವಿಶೇಷ ಕರ್ತವ್ಯದ ಅಧಿಕಾರಿ (ವಿದೇಶಾಂಗ ವ್ಯವಹಾರಗಳು) ವೇಣು ರಾಜಮಣಿ, ಮುಖ್ಯಮಂತ್ರಿಗಳ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ರಹಾಂ, ವಿಯೆಟ್ನಾಂ ನಿಯೋಗದ ಸದಸ್ಯರಾದ ರಾಜಕೀಯ ಕೌನ್ಸಿಲರ್ ಗುಯೆನ್ ಥಿ ನಾಗೊಕ್ ಡೂಂಗ್, ಕೌನ್ಸಿಲರ್ ಗುಯೆನ್ ಥಿ ತಾನ್ಸುವಾನ್, ಟ್ರೇಡ್ ಕೌನ್ಸಿಲರ್ ಬುಯಿ ಟ್ರುಂಗ್ ತುವಾಂಗ್, ಪತ್ರಿಕಾ ಅಟ್ಯಾಚೆ ಸಾನ್ ಹೋವಾಂಗ್ ಮೆಡುಂಗ್, ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿ.ಪಿ ಮಾಧವನ್ ಪಿಳ್ಳೈ, ಕೇರಳ ಡಿಜಿಟಲ್ ವಿಶ್ವವಿದ್ಯಾಲಯದ ವೈಸ್ ಚಾನ್ಸೆಲರ್ ಡಾ. ಸಜಿ ಗೋಪಿನಾಥ್, ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ. ವೇಣು, ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿಂಕು ಬಿಸ್ವಾಲ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಕೆ. ಇಳಂಗೋವನ್,ಐಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ,ಕೃಷಿ ಇಲಾಖೆಯ ಕಾರ್ಯದರ್ಶಿ ಸಿ.ಎ.ಲತಾ,ಕೈಗಾರಿಕಾ ಇಲಾಖೆಯ ನಿರ್ದೇಶಕ ಎಸ್. ಹರಿಕಿಶೋರ್, ಕೃಷಿ ನಿರ್ದೇಶಕ ಟಿ.ವಿ. ಸುಭಾಷ್, ಮೀನುಗಾರಿಕೆ ನಿರ್ದೇಶಕ ಆರ್. ಗಿರಿಜಾ ಮುಂತಾದವರು ವಿವಿಧ ಅಧಿವೇಶನದಲ್ಲಿ ಭಾಗವಹಿಸಿದರು.
ಮೊದಲ ದಿನ ತಂಡವು ವೆಲ್ಲಯಾಣಿ ಕೃಷಿ ಕಾಲೇಜು ಮತ್ತು ತಿರುವನಂತಪುರಂ ವಿಶ್ವವಿದ್ಯಾಲಯ ಕಾಲೇಜಿಗೆ ಭೇಟಿ ನೀಡಿತು. ತಂಡವು ಎರಡೂ ಸಂಸ್ಥೆಗಳ ಶಿಕ್ಷಕರೊಂದಿಗೆ ಸಂವಾದ ನಡೆಸಿತು. ತಿರುವನಂತಪುರಂ ಮ್ಯೂಸಿಯಂಗೂ ತಂಡ ಭೇಟಿ ನೀಡಿತು. ಕೇರಳದ ಆರೋಗ್ಯ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು, ತಿರುವನಂತಪುರಂ, ಆಮಚ್ಚಲ್ ಕುಟುಂಬ ಆರೋಗ್ಯ ಕೇಂದ್ರ ಮತ್ತು ವೆಲ್ಲಯಂಬಲಂನ ಸಿ.ಎಫ್.ಎಲ್.ಟಿ.ಸಿ.ಗೂ ಭೇಟಿ ನೀಡಿದರು. ಆಸ್ಪತ್ರೆಗಳಲ್ಲಿ,ಕೋವಿಡ್ ಚಿಕಿತ್ಸಾ ಸಂಸ್ಥೆಗಳಲ್ಲಿನ ಸೌಲಭ್ಯಗಳಲ್ಲಿ ಕೇರಳ ಸಾಧಿಸಿದ ಸಾಧನೆಗಳನ್ನು ತಂಡವು ಶ್ಲಾಘಿಸಿತು.
ನವೆಂಬರ್ ಒಂಭತ್ತರಂದು ತಂಡ ಕೊಲ್ಲಂ ಜಿಲ್ಲೆಗೆ ಭೇಟಿ ನೀಡಿತು. ಕೊಟ್ಟಿಯತ್ತು ಕ್ಯಾಶು ಡೆವಲಪ್ಮೆಂಟ್ ಕಾರ್ಪೊರೇಷನ್ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಅವರು ಇಲ್ಲಿನ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಗೋಡಂಬಿಯ ಮಾರುಕಟ್ಟೆ ಸಾಮರ್ಥ್ಯವನ್ನು ಅನ್ವೇಷಿಸುವ ಜೊತೆಗೆ ಸಂಸ್ಕರಣೆಯ ವಿಧಾನವನ್ನು ಅರ್ಥಮಾಡಿಕೊಳ್ಳಲಾಯಿತು. ಪಾರಿಪಳ್ಳಿಯ ಆನೆ ಶಿಬಿರಕ್ಕೂ ಭೇಟಿ ನೀಡಿದರು.