News Karnataka Kannada
Tuesday, April 30 2024
ದೇಶ

ಅಸ್ಸಾಂ-ಮೇಘಾಲಯ ಗಡಿ ಸಮಸ್ಯೆ ಅಮಿತ್ ಶಾ ಸಮ್ಮುಖದಲ್ಲಿ ಇತ್ಯರ್ಥ!

Amit Shah to visit Delhi Police Headquarters today
Photo Credit :

ಅಸ್ಸಾಂ-ಮೇಘಾಲಯ ನಡುವೆ ಉಂಟಾಗಿದ್ದ ಸುದೀರ್ಘ ಗಡಿ ಸಮಸ್ಯೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಇತ್ಯರ್ಥಗೊಂಡಿದೆ.

ಉಭಯ ರಾಜ್ಯದ ಮುಖ್ಯಮಂತ್ರಿಗಳು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕುವ ಮೂಲಕ 50 ವರ್ಷಗಳಿಂದ ಉಂಟಾಗಿದ್ದ ಗಡಿ ಸಂಘರ್ಷ ಅಂತ್ಯಗೊಂಡಿತು.

ದಶಕಗಳಿಂದಲೂ ಜೀವಂತವಾಗಿದ್ದ ಗಡಿ ವಿವಾದ ಇದೀಗ ಮುಕ್ತಾಯಗೊಂಡಿರುವ ಕಾರಣ ಈಶಾನ್ಯ ಭಾಗಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಗೃಹ ಸಚಿವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಗಿ ಅಸ್ಸಾಂ ಮುಖ್ಯಮಂತ್ರಿ ಹೇಮಂತ್​​ ಬಿಸ್ವಾ ಶರ್ಮಾ ಹಾಗೂ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಸಹಿತ ಮೇಘಾಲಯದ ಸರ್ಕಾರದ ಪರವಾಗಿ 11 ಪ್ರತಿನಿಧಿಗಳು ಹಾಗೂ ಅಸ್ಸೋಂ ಪರವಾಗಿ 9 ಪ್ರತಿನಿಧಿಗಳು ಭಾಗಿಯಾಗಿದ್ದರು.

ಇಂದು ನಡೆದ ಮಹತ್ವದ ಒಪ್ಪಂದದ ಪ್ರಕಾರ ಎರಡೂ ಸರ್ಕಾರಗಳು ರಾಜ್ಯದ ಗಡಿಯಲ್ಲಿ 885 ಕಿಲೋ ಮೀಟರ್ ಉದ್ದದ ಗಡಿ ಭೂಮಿ ಹಂಚಿಕೊಳ್ಳಲು ನಿರ್ಧರಿಸಿವೆ. ಪ್ರಮುಖವಾಗಿ ತರಾಬರಿ ಮೇಲ್ದಂಡೆ, ಗಂಜಾಗ್ ಮೀಸಲು ಅರಣ್ಯ ಪ್ರದೇಶ, ಹಾಹಿಂ, ಲಾಂಗ್​ಪಿಹ್​, ಬೋರ್ಡುವಾರ್​, ಬೊಕ್ಲಾಪಾರಾ, ನೋಂಗ್​ವಾ, ಮಾಟಮುರ್​, ಖಾನಾಪಾರಾ-ಪಿಲಂಕಾಟಾ, ಖಂಡುಲಿ ಮತ್ತು ರೆಟಾಚೆರಾ ಪ್ರದೇಶದಲ್ಲಿ ಉಭಯ ರಾಜ್ಯಗಳ ಮಧ್ಯೆ ಗಡಿ ಸಮಸ್ಯೆ ಇತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು