Bengaluru 17°C

ಐರ್ಲೆಂಡ್​ನಲ್ಲಿ ಕಾರು ಅಪಘಾತ: ಭಾರತದ ಇಬ್ಬರು ವಿದ್ಯಾರ್ಥಿಗಳು ಮೃತ್ಯು!

ಐರ್ಲೆಂಡ್​ನಲ್ಲಿ ಕಾರ್​ ಅಪಘಾತ ಸಂಭವಿಸಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಜೀವ ಕಳೆದುಕೊಂಡ ಘಟನೆ ನಡೆದಿದೆ. ಭಾರತೀಯ ಮೂಲದ ಭಾರ್ಗವ್​ ಚಿತ್ತೂರಿ ಹಾಗೂ ಸುರೇಶ ಚೆರುಕುರಿ ಎಂಬ ವಿದ್ಯಾರ್ಥಿಗಳು ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಐರ್ಲೆಂಡ್​ನಲ್ಲಿ ಕಾರ್​ ಅಪಘಾತ ಸಂಭವಿಸಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಜೀವ ಕಳೆದುಕೊಂಡ ಘಟನೆ ನಡೆದಿದೆ. ಭಾರತೀಯ ಮೂಲದ ಭಾರ್ಗವ್​ ಚಿತ್ತೂರಿ ಹಾಗೂ ಸುರೇಶ ಚೆರುಕುರಿ ಎಂಬ ವಿದ್ಯಾರ್ಥಿಗಳು ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ಕಾರು ಅಪಘಾತ ಜನವರಿ 31 ರಂದು ನಡೆದಿದೆ ರಾಥಿಯೋದ ಲೀಗ್ಹ್​ ಎಂಬಲ್ಲಿ ರೋಡಿನ ಪಕ್ಕದಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕಾರಿನಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಇನ್ನಿಬ್ಬರು ಇದ್ದರಂತೆ ಒಬ್ಬ ಹುಡುಗ ಮತ್ತು ಒಬ್ಬಳು 20 ವರ್ಷದ ಹುಡುಗಿ. ಅವರಿಬ್ಬರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅವರನ್ನು ಲುಕೇ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.


ಇನ್ನು ಡಬ್ಲಿನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿದ್ಯಾರ್ಥಿಗಳಿಗೆ ಶೃದ್ಧಾಂಜಲಿಯನ್ನು ಅರ್ಪಿಸಲಾಗಿದೆ. ಐರ್ಲೆಂಡ್​ನಲ್ಲಿರುವ ಭಾರತದ ಮೂಲದವರಿಂದ ಕಳೆಬರಹವನ್ನು ಸಾಗಿಸುವುದಕ್ಕಾಗಿ ನಿಧಿ ಸಂಗ್ರಹಿಸಲಾಗಿದೆ.


ಒಟ್ಟು 25 ಸಾವಿರ ಯುರೋ ಸಂಗ್ರಹಿಸಿ ಮೃತರ ಕುಟುಂಬಕ್ಕೆ ನೆರವು ನೀಡಿದ್ದಾರೆ. ಆಡಿ ಎ6 ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭಿವಿಸಿದೆ. ಅಪಘಾತದಲ್ಲಿ ಭಾರತದ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದು, ಐರ್ಲೆಂಡ್​ ಪ್ರಧಾನಿ ಆಘಾತ ವ್ಯಕ್ತಪಡಿಸಿದ್ದು. ಸಂತಾಪ ಸೂಚಿಸಿದ್ದಾರೆ.


Nk Channel Final 21 09 2023