Categories: ವಿದೇಶ

ಅತಿದೊಡ್ಡ ಲೈಂಗಿಕ ಹಗರಣ ಬಯಲು: ಅತಿರಥರ ಹೆಸರು ಬಿಡುಗಡೆ

ವಾಷಿಂಗ್ಟನ್‌: ಇಡೀ ಪ್ರಪಂಚವನ್ನೇ ಕಂಟ್ರೋಲ್ ಮಾಡಿದ್ದ ಅಮೆರಿಕಾದ ಅತಿರಥ ಮಹಾರಥರಿಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ಅಮೆರಿಕಾದಲ್ಲಿ ಅತಿದೊಡ್ಡ ಲೈಂಗಿಕ ಹಗರಣವೊಂದು ಬೆಳಕಿಗೆ ಬಂದಿದ್ದು ಡೋನಾಲ್ಡ್ ಟ್ರಂಪ್‌, ಬಿಲ್‌ ಕ್ಲಿಂಟನ್‌ ಹೀಗೆ ಹತ್ತಾರು ಅತಿರಥ ಮಹಾರಥರ ಹೆಸರು ಬಟಾ ಬಯಲಾಗಿದೆ.

ಅಮೆರಿಕಾದಲ್ಲಿ ಬೆಳಕಿಗೆ ಬಂದ ಈ ಲೈಂಗಿಕ ಹಗರಣದಲ್ಲಿ ಬೆಚ್ಚಿ ಬೀಳಿಸೋ ಅಂಶಗಳೇ ಬೆಳಕಿಗೆ ಬಂದಿದೆ. ಅಮೆರಿಕಾದ ಗಣ್ಯ ವ್ಯಕ್ತಿಗಳು ರಹಸ್ಯವಾಗಿ ಹೆಲಿಕಾಪ್ಟರ್‌ಗಳಲ್ಲಿ ದ್ವೀಪ ಪ್ರದೇಶಕ್ಕೆ ತೆರಳುತ್ತಿದ್ದರು. ಅಲ್ಲಿ ಹುಡುಗಿಯರ ಮೇಲೆ ಇವರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಜೆಫ್ರಿ ಎಪಿಸ್ಟನ್ ಮಾಲೀಕತ್ವದ ದ್ವೀಪದಲ್ಲಿ ಈ ರೀತಿಯ ಲೈಂಗಿಕ ದೌರ್ಜನ್ಯದ ಹಗರಣಗಳು ನಡೆದಿದೆ ಎನ್ನಲಾಗಿದೆ. ಕೋರ್ಟ್‌ಗೆ ಈ ಬಗ್ಗೆ ಮಹತ್ವದ ದಾಖಲೆಗಳು ಸಲ್ಲಿಕೆಯಾಗಿದೆ. ಲೈಂಗಿಕ ಹಗರಣದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್‌, ಮೈಕಲ್ ಜಾಕ್ಸನ್ ಸೇರಿದಂತೆ ಖ್ಯಾತನಾಮರ ಹೆಸರುಗಳು ಸೇರಿದೆ.

ಇನ್ನು ಈ ಹಗರಣ ಬೆಳಕಿಗೆ ಬರಲು ಕಾರಣವಾಗಿರೋದು ಜೆಫ್ರಿ ಎಪಿಸ್ಟನ್‌ ಎಂಬಾತನಿಂದ. ಜೆಫ್ರಿ ಎಪಿಸ್ಟನ್ ಅಮೆರಿಕಾದ ದ್ವೀಪ ಪ್ರದೇಶಗಳ ಮಾಲೀಕನಾಗಿದ್ದ. ಈತನ ವಿಚಾರಣೆ ವೇಳೆ ಅಮೆರಿಕಾದ ಈ ಖ್ಯಾತನಾಮರ ಹೆಸರನ್ನು ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದೆ.

ಇನ್ನು ಇನ್ನೊಂದು ವಿಚಾರವೆಂದರೆ ಜೆಫ್ರಿ ಎಪಿಸ್ಟನ್ ಅವರನ್ನು 2019ರಲ್ಲಿ ಅಮೆರಿಕಾದ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಬಂಧನದ ಒಂದು ತಿಂಗಳ ಬಳಿಕ ಜೆಫ್ರಿ ಎಪಿಸ್ಟನ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಹಾಗಾಗಿ ಜೆಫ್ರಿ ಎಪಿಸ್ಟನ್ ಕುರಿತ ತನಿಖಾ ವರದಿ ಸದ್ಯ ಕೋರ್ಟ್‌ ಅಂಗಳದಲ್ಲಿದೆ ಎನ್ನಲಾಗ್ತಿದೆ.

Ashitha S

Recent Posts

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

9 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

16 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

26 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

37 mins ago

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

47 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

53 mins ago