Categories: ವಿದೇಶ

ಭೀಕರ ಬರಕ್ಕೆ ತುತ್ತಾದ ಅಮೆಜಾನ್: ಸತ್ತು ಬೀಳುತ್ತಿವೆ ಡಾಲ್ಫಿನ್‌ಗಳು

ದಕ್ಷಿಣ ಅಮೇರಿಕಾ: ದಕ್ಷಿಣ ಅಮೆರಿಕದಲ್ಲಿ ಚಾಚಿಕೊಂಡಿರುವ ಅಮೆಜಾನ್ ನದಿ, ಕೋಟ್ಯಂತರ ಜನರ ಪಾಲಿಗೆ ಅಮೃತದ ಬಟ್ಟಲು. 6,400 ಕಿಲೋ ಮೀಟರ್ ಅಥವಾ 4,000 ಮೈಲಿ ದೂರ ಹರಿಯುವ ಅಮೆಜಾನ್ ನದಿ ಇದು.  ಬ್ರೆಜಿಲ್‌ ದೇಶದಲ್ಲಿ ಅಮೆಜಾನ್ ಮಳೆಕಾಡಿನ ಬಹುಭಾಗ ಆವರಿಸಿದ್ದು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಆದರೆ ಈ ಬಾರಿ ಅಮೆಜಾನ್‌ನ ಪ್ರಮುಖ ಉಪನದಿಗಳ ಪೈಕಿ 2 ಉಪನದಿಗಳು ಸಂಪೂರ್ಣ ಬತ್ತಿ ಹೋಗಿವೆ.

ರಿಯೊ ನೆಗೊ ಹಾಗೂ ಮಡೈರಾಗೆ ಈ ಪರಿಸ್ಥಿತಿ ಎದುರಾಗಿದೆ. ಸೊಲಿಮೊಸ್, ಜುರುವಾ, ಪುರಸ್ ನದಿಗಳ ನೀರಿನ ಮಟ್ಟ ಕೂಡ ಸಾರ್ವಕಾಲಿಕ ಮಟ್ಟದಲ್ಲಿ ಕುಸಿತ ಕಂಡಿದೆ. ಹೀಗಾಗಿ ವರ್ಷ ಪೂರ್ತಿ ತುಂಬಿ ಹರಿಯುವ ಅಮೆಜಾನ್ ನದಿ ಈಗ ಬರಿದಾಗಿ, ಬಿರುಕು ಬಿಟ್ಟ ನೆಲ ಕಾಣುತ್ತಿದೆ.

ಪ್ರಪಂಚದಲ್ಲೇ ಅತೀಹೆಚ್ಚು ಇಂಗಾಲದ ಡೈ ಆಕ್ಸೈಡ್​ ಅನ್ನು ಹೀರಿಕೊಳ್ಳುವ ಅಮೆಜಾನ್ ಪ್ರದೇಶ ಭೀಕರ ಬರಕ್ಕೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಘೀಧೇ. ಕಳೆದ 100 ವರ್ಷಗಳಿಂದ ಇಂತಹ ಬರ ಬರಲಿಲ್ಲವೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಲವಾರು ಉಪನದಿಗಳಿಂದ ಕೂಡಿದ ಅಮೆಜಾನ್ ನದಿಯು ನೂರಾರು ಹಳ್ಳಿಗಳನ್ನು ತಲುಪುತ್ತಿಲ್ಲವಾಗಿದೆ. ನೀರಿಲ್ಲದೇ ಸಾವಿರಾರು ಜಲಚರಗಳು ಸಾವನ್ನಪ್ಪುತ್ತಿದೆ. ಇನ್ನು ಅಮೆಜಾನ್ ಕಾಡಿನಲ್ಲೂ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು ಅಲ್ಲಲ್ಲಿ ಕಾಡ್ಗಿಚ್ಚು ಹಬ್ಬಿ ಅರಣ್ಯ ನಾಶವಾಗ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಪಂಚದ ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಳ್ಳ ಬೇಕಾಗಬಹುದು ಹಾಗೆಯೇ ಇದು ಜಗತ್ತಿನ ವಿನಾಶದ ಸೂಚನೆ ಎಂದು ವಿಜ್ಞಾನಿಗಳು ಆತಂಕ ಹೊರಹಾಕಿದ್ದಾರೆ.

ಅಮೆಜಾನ್ ಕಾಡಿನಲ್ಲಿ ಬರ ಆವರಿಸಿರುವ ಕಾರಣ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಜೊತೆಗೆ ತಿನ್ನಲು ಅನ್ನ ಇಲ್ಲದೆ, ಕುಡಿಯುವ ನೀರಿಗೂ ಬರ ಎದುರಾಗಿದೆ. ಹಾಗೇ ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು, ತರಕಾರಿ ಮಾರುತ್ತಿದ್ದ ಬುಡಕಟ್ಟು ಜನಾಂಗದವರು ಕೂಡ ಏನು ಮಾಡುವುದು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

ಬೇಸರದ ಸಂಗತಿಯೆಂದರೇ ಏನೂ ತಪ್ಪು ಮಾಡದ ಮನುಷ್ಯ ಸ್ನೇಹಿಯಾಗಿ ಬದುಕುತ್ತಿರುವ ಅಮೆಜಾನ್ ನದಿಯ ಸಿಹಿ ನೀರಿನ ಡಾಲ್ಫಿನ್ಸ್ ಕೂಡ ಸತ್ತು ದಡಕ್ಕೆ ಬಂದು ಬಿದ್ದಿವೆ. ಹಾಗೇ ಅಮೆಜಾನ್ ಕಾಡಿನಲ್ಲಿ ಈವರೆಗೆ ಸಾವಿರಾರು ತಳಿಯ ಸಸ್ಯಗಳು ನಾಶವಾಗಿವೆ ಅಂತಾ ಹೇಳಲಾಗಿದೆ. ಇದು ಅಮೆಜಾನ್ ಕಾಡಿನ ಭೀಕರ ಬರಗಾಲದ ಎಫೆಕ್ಟ್. ಇನ್ನು ಪರಿಸ್ಥಿತಿ ಹೀಗೆ ಕೈಮೀರಿ ಹೋದರೂ ಬ್ರೆಜಿಲ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

Ashitha S

Recent Posts

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

1 hour ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

2 hours ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

3 hours ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

3 hours ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

3 hours ago