News Karnataka Kannada
Monday, April 29 2024
ವಿದೇಶ

ಬಿಹಾರದಲ್ಲಿನ ಕಳಪೆ ಪ್ರದರ್ಶನ: ಕಪಿಲ್ ಸಿಬಲ್ ಕಿಡಿ

Photo Credit :

ಬಿಹಾರದಲ್ಲಿನ ಕಳಪೆ ಪ್ರದರ್ಶನ: ಕಪಿಲ್ ಸಿಬಲ್ ಕಿಡಿ

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿನ ಕಳಪೆ ಪ್ರದರ್ಶನದ ಬಳಿಕ ಕಾಂಗ್ರೆಸ್ ನ ನಾಯಕತ್ವದ ಬಗ್ಗೆ ಟೀಕಿಸಿದವರಲ್ಲಿ ಕಪಿಲ್ ಸಿಬಲ್ ಅವರು ಒಬ್ಬರು. ಈಗ ಅವರು ಬಿಹಾರ ಚುನಾವಣೆ ಬಳಿಕ ಮತ್ತೊಮ್ಮೆ ನಾಯಕತ್ವದ ವಿರುದ್ಧ ಕಿಡಿಕಾರಿರುವರು.

ಈಗಾಗಲೇ ಮಹಾಘಟಬಂಧನ್ ನ ಮೈತ್ರಿ ಪಕ್ಷವಾಗಿರುವ ಆರ್ ಜೆಡಿ ಕೂಡ ಸೋಲಿಗೆ ಕಾಂಗ್ರೆಸ್ ಕಾರಣವೆಂದು ಹೇಳಿದೆ. ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಪಕ್ಷವು ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿರುವರು.

ಬಿಹಾರದಲ್ಲಿನ ಕಳಪೆ ಪ್ರದರ್ಶನದ ಬಗ್ಗೆ ಪಕ್ಷದ ಉನ್ನತ ನಾಯಕರು ಮೌನವಾಘಿದ್ದಾರೆ. 2015ರ ಚುನಾವಣೆಗಿಂತಲೂ ಕಾಂಗ್ರೆಸ್ ನ ಸೀಟು ಕಡಿಮೆ ಆಗಿದೆ ಎನ್ನುವುದನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.

ಬಿಹಾರದಲ್ಲಿನ ಪ್ರದರ್ಶನದ ಬಗ್ಗೆ ಪಕ್ಷದ ಉನ್ನತ ನಾಯಕರು ಮಾತನಾಡಬೇಕಾಗಿದೆ. ಆದರೆ ಅವರು ಎಲ್ಲವೂ ಸರಿಯಾಗಿದೆ ಎಂದು ಭಾವಿಸಿರಬಹುದು ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು