ಜಾರ್ಖಂಡ್: ಶುಕ್ರವಾರ ನಾಲ್ವರು ಪೊಲೀಸ್ ಅಧಿಕಾರಿಗಳ ಹತ್ಯೆ ನಂತರ ಇಂದು ನಕ್ಸಲರ ವಿರುದ್ಧ ಜಾರ್ಖಂಡ್ ನ ಲ್ಯಾಟರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.
ಲ್ಯಾಟರ್ ಜಿಲ್ಲೆಯ ಎಸ್ ಪಿ ಪ್ರಶಾಂತ್ ಆನಂದ್, ಭಯೋತ್ಪಾದಕ ನಿಗ್ರಹ ದಳದ ಎಸ್ ಪಿ ವಿಪುಲ್ ಪಾಂಡೆ ಹಾಗೂ ಸಿಆರ್ ಪಿಎಫ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿದ್ದಾರೆ.
ಪೊಲೀಸ್ ಹತ್ಯೆಗೀಡಾದ ಸ್ಥಳದಲ್ಲಿ ಬಿಗಿ ಬಂದೀಬಸ್ತ್ ನಲ್ಲಿ ತನಿಖೆ ನಡೆಸಲಾಗುತ್ತಿದೆ.
ಶುಕ್ರವಾರ ಪೊಲೀಸರು ತೆರಳುತ್ತಿದ್ದ ಪಿಸಿಆರ್ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ. ಅದರಲ್ಲಿದ್ದ ಎಸ್ ಐ ಸಕ್ರ ಉರಾನ್ವ ಹಾಗೂ ಮೂವರು ಹೋಂ ಗಾರ್ಡ್ ಗಳಾದ ದಿನೇಶ್ ಕುಮಾರ್, ಸಿಕಂದರ್ ಸಿಂಗ್ ಹಾಗೂ ಯಮುನ್ ರಾಮ್ ಅವರು ಸಾವನ್ನಪ್ಪಿದ್ದಾರೆ.