ನವದೆಹಲಿ: ಐದು ರಾಜ್ಯಗಳ ಚುನಾವಣೆಗಳು ಇಂದು ಕೊನೆಗೊಂಡಿದ್ದು, ಕೆಲವೊಂದು ಮತದಾನೋತ್ತರ ಸಮೀಕ್ಷೆಯ ಪ್ರಕಾರ ರಾಜಸ್ಥಾನ, ಛತ್ತೀಸ್ ಗಡ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಅಧಿಕಾರಕ್ಕೆ ಕತ್ತುಕತ್ತಿನ ಹೋರಾಟ ನಡೆಯಲಿದೆ ಎಂದು ಟೈಮ್ಸ್ ನೌ, ಸಿವೋಟರ್ ಮತ್ತು ಇಂಡಿಯಾ ಟುಡೆ, ಜನ್ ಕಿ ಬಾತ್ ಸಮೀಕ್ಷೆಗಳು ಹೇಳಿವೆ.
ಮುಂದಿನ ಲೋಕಸಭೆಗೆ ಮೊದಲಿನ ಸೆಮಿಫೈನಲ್ ಎಂದು ಪರಿಗಣಿಸಲಾಗಿರುವಂತಹ ಈ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದಿರುವುದು ಎಲ್ಲಾ ಸಮೀಕ್ಷೆಗಳಿಂದ ತಿಳಿದುಬಂದಿದೆ.
ಡಿಸೆಂಬರ್ 11ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಹೊರಬೀಳಲಿದೆ.
ಟೈಮ್ಸ್ ನೌ ಮತ್ತು ಸಿಎನ್ ಎಕ್ಸ್ ನಡೆಸಿರುವ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿಗೆ 85, ಕಾಂಗ್ರೆಸ್ 105 ಮತ್ತು ಇತರ ಏಳು ಸ್ಥಾನ ಪಡೆಯಲಿದೆ. ಅದೇ ತೆಲಂಗಾಣದಲ್ಲಿ ಟಿಆರ್ ಎಸ್ 66, ಕಾಂಗ್ರೆಸ್ ಮೈತ್ರಿಕೂಟ 37, ಬಿಜೆಪಿ 7 ಸ್ಥಾನ ಪಡೆಯಲಿದೆ. ಛತ್ತೀಗಡದಲ್ಲಿ ಬಿಜೆಪಿ 46, ಕಾಂಗ್ರೆಸ್ 35 ಮತ್ತು ಇತರರು 9 ಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ 126, ಕಾಂಗ್ರೆಸ್ 89, ಇತರರು 15 ಸ್ಥಾನ ಗಳಿಸುವರು.
ಇಂಡಿಯಾಟುಡೇ-ಎಕ್ಸಿಸ್ ನಡೆಸಿರುವಂತಹ ಸಮೀಕ್ಷೆಯಂತೆ ರಾಜಸ್ಥಾನದಲ್ಲಿ ಕಾಂಗ್ರೆಸ್ 119-141, ಬಿಜೆಪಿ 55-72, ಇತರರು 4-13 ಸ್ಥಾನ ಪಡೆಯುವರು. ಮಧ್ಯಪ್ರದೇಶದಲ್ಲಿ ಬಿಜೆಪಿ 102-120, ಕಾಂಗ್ರೆಸ್ 104-122 ಮತ್ತು ಇತರರು 4-11 ಸ್ಥಾನ ಪಡೆಯುವರು.
ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.
ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…
ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…