LAKE VISIT

ಸೂಳೆಕೆರೆ ಅಭಿವೃದ್ಧಿಗೆ ಶಾಸಕ ಡಿ.ಸಿ.ತಮ್ಮಣ್ಣ ಮನವಿ

ಭಾರತೀನಗರ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹೊರ ವಲಯದಲ್ಲಿರುವ ಸೂಳೆಕೆರೆ ಮತ್ತು ನಾಲೆಯನ್ನು ಅಭಿವೃದ್ಧಿ ಗೊಳಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೈಕ್ ನಲ್ಲಿ ಸಂಚರಿಸಿ ಕೆರೆ ಮತ್ತು ನಾಲೆಯನ್ನು ವೀಕ್ಷಣೆ ಮಾಡಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ ಅವರು, ಕೆರೆಯಲ್ಲಿ ಬೆಳೆದಿರುವ ಜೊಂಡುಗಳನ್ನು ತೆರವುಗೊಳಿಸದಿದ್ದರೆ ಕೆರೆಗೆ ನೀರು ತುಂಬಿಕೊಂಡಾಗ ನಾಲೆಗಳಿಗೆ ನೀರು ಸಾಗದೆ ಕೆರೆಯ ಆಜು ಬಾಜಿನಲ್ಲಿರುವ ಜಮೀನುಗಳಿಗೆ ನೀರುನುಗ್ಗಿ ರೈತರ ಬೆಳೆಗಳು ನಷ್ಟವಾಗುತ್ತವೆ. ಹಾಗಾಗಿ ಕೂಡಲೇ ಕೆರೆಯಲ್ಲಿರುವ ಜೊಂಡುಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರಲ್ಲದೆ, ಸ್ಥಳೀಯ ರೈತರಿಂದ ಮತ್ತು ಕಾವೇರಿ ನೀರಾವರಿ ನಿಗಮದ ಸವಡೆಗಳಿಂದ ಜೊಂಡನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಹಾಗಾಗಿ ಕೆರೆ ವೀಕ್ಷಣೆಗೆ ಬಂದಿರುವುದಾಗಿ ಅವರು ಹೇಳಿದರು. ಬೆಂಗಳೂರಿನ ಬೆಳಂದೂರು ಕೆರೆಯಲ್ಲಿ ಹೇಗೆ ಜೊಂಡನ್ನು ತೆಗೆಯಲು ವೀಡ್ ಕಟ್ಟರ್ ಬೋಟ್ ಉಪಯೋಗಿಸುತ್ತಾರೆಯೋ ಹಾಗೆಯೇ ಇಲ್ಲಿ ಕೂಡ ಜೊಂಡುಗಳನ್ನು ತೆಗೆಯಲು ವೀಡ್ಕಟ್ಟರ್ ಬೋಟ್ಗೆ ಅನುದಾನಕೋರಿ…

3 years ago