DRUNKARD

ಕುಡಿದ ಮತ್ತಿನಲ್ಲಿ ತಾಯಿ-ತಂಗಿಯ ಹತ್ಯೆ

ಕಾರವಾರ:ಕುಡಿದ ಮತ್ತಿನಲ್ಲಿ ಮಗನೊಬ್ಬ ಸಾಂಬಾರು ಸರಿಯಾಗಿಲ್ಲ ಎಂದು ಜಗಳ ತೆಗೆದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ…

3 years ago

ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ನಿಂತವರನ್ನು ಕೀಳಾಗಿ ಕಾಣಬಾರದು : ಕೇರಳ ಹೈಕೋರ್ಟ್

ಕೊಚ್ಚಿ : ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಸಾಲು ನಿಂತವರನ್ನು ಕೀಳಾಗಿ ಕಾಣಬಾರದು ಮತ್ತು ಅವರಿಗೆ ಮುಜುಗರವಾಗುವಂತಹ ಪರಿಸ್ಥಿತಿ ಇರಬಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳ ಪಾನೀಯ…

3 years ago

ನಾಪತ್ತೆಯಾದ ಪತಿಗಾಗಿ ಪತ್ನಿ ಹುಡುಕಾಟ

ಪಾಂಡವಪುರ: ಮದ್ಯ ವ್ಯಸನಿಯಾಗಿದ್ದ ಪತಿ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಗುಮ್ಮನಹಳ್ಳಿ ಗ್ರಾಮದ ನಿವಾಸಿ ಶಿವಾನಂದ ಎಂಬಾತನೇ ನಾಪತ್ತೆಯಾದವನು. ಈತ ಆ.28ರಂದು ತನ್ನ ಮನೆಯಿಂದ ಹೊರ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದ್ದು, ಈ ಸಂಬಂಧ ಪತಿಗಾಗಿ ಹುಡುಕಾಟ ನಡೆಸಿದ ಪತ್ನಿ ಪ್ರೇಮ ಅವರು ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಲ್ಲಿ ನನ್ನ ಪತಿ ಮದ್ಯವ್ಯಸನಿಯಾಗಿದ್ದು, ಯಾವ ಕೆಲಸವೂ ಮಾಡದೆ ಊರಿನಲ್ಲಿ ಅಲೆದಾಡುತ್ತಾ ವೃಥಾ ಕಾಲ ಕಳೆಯುತ್ತಾ ಮನೆಯಲ್ಲೇ ಇರುತ್ತಿದ್ದರು. ನಾನು ಮೈಸೂರಿನಲ್ಲಿ ಲೂನಾರ್‍ಸ್ ಕಂಪೆನಿಯಲ್ಲಿ ಕೂಲಿ ಮಾಡಿಕೊಂಡಿದ್ದು, ಆ.28ರಂದು ಬೆಳಗ್ಗೆ ಸುಮಾರು 7.15ರ ಸಮಯದಲ್ಲಿ ಎಂದಿನಂತೆ ನಾನು ಕೂಲಿ ಕೆಲಸಕ್ಕಾಗಿ ಮೈಸೂರಿಗೆ ಹೋಗುವಾಗ ಮನೆಯಲ್ಲೇ ಇದ್ದ ಪತಿ ಸಂಜೆ ಸುಮಾರು 7ಗಂಟೆಗೆ ಮೈಸೂರಿನಿಂದ ನಾನು ಮನೆಗೆ ಬಂದ ವೇಳೆ ಮನೆಯಲ್ಲಿ ಕಾಣಲಿಲ್ಲ. ಬಳಿಕ ರಾತ್ರಿಯಾದರೂ ಮನೆಗೆ ಬಾರದ ಕಾರಣ ಅತ್ತೆ ಪುಟ್ಟಮ್ಮ ಮತ್ತು ಮೈದ ರಾಜೇಶ್ ಅವರಿಗೆ ತಿಳಿಸಿದ ನಂತರ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮನೆಯಿಂದ ಕಾಣೆಯಾದ ವೇಳೆ ತಿಳಿ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಕಾಫಿ ಕಲರ್ ಚಡ್ಡಿ, ಹಸಿರು ಬಣ್ಣದ ಟವೆಲ್ ಹಾಕಿರುತ್ತಾರೆ. ನನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರೇಮ ಮನವಿ ಮಾಡಿದ್ದಾರೆ. ಕಾಣೆಯಾದ ಶಿವಾನಂದ 5.2 ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಸಾಧಾರಣ ಮೂಗು, ಕಪ್ಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ಅಲ್ಲಲ್ಲಿ ಬಿಳಿ ಕೂದಲು ಇರುತ್ತೆ. ಸಣ್ಣದಾಗಿ ಮೀಸೆ ಇರುತ್ತೆ, ಎರಡು ಕಿವಿ ಚುಚ್ಚಿದ್ದು, ಕಾಲಿನ ಉಗುರುಗಳು ಮಡಚಿಕೊಂಡಿರುತ್ತವೆ. ಕನ್ನಡ ಭಾಷೆ ಮಾಡಲಿದ್ದು, ಅವಿದ್ಯಾವಂತರಾಗಿದ್ದಾರೆ.  ಈತನ ಸುಳಿವು ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

3 years ago

ಕುಡಿಯಲು ಹಣಕ್ಕಾಗಿ ಪೀಡಿಸುತಿದ್ದ ಮಗನನ್ನು ಕೊಂದ ತಂದೆ

ಧಾರವಾಡ: ಮದ್ಯಪಾನ ಮಾಡಲು ಹಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ ಮಗನನ್ನು ತಂದೆ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ತೆಲುಗರ ಓಣಿಯಲ್ಲಿ ನಡೆದಿದೆ. ತಂದೆ ಫಕೀರಪ್ಪ…

3 years ago

ಕುಡುಕನ ಪತ್ನಿ , ಇಬ್ಬರು ಹೆಣ್ಣು ಮಕ್ಕಳು ನೇಣಿಗೆ ಶರಣು

ಹೈದರಾಬಾದ್​: ಮನೆಯೊಳಗೇ ಮಲಗಿದ್ದ ಆತನಿಗೆ ಬೆಳ್ಳಂಬೆಳಗ್ಗೆ ತನ್ನ ಮಗಳು ಕೂಗಾಡುತ್ತಿದ್ದುದನ್ನು ಕೇಳಿ ಪಕ್ಕದ ಕೋಣೆಯನ್ನು ಹೊಕ್ಕು ನೋಡಿದಾಗ ತೀವ್ರ ಆಘಾತವಾಗುವಂಥ ದೃಶ್ಯ ಕಂಡು ಬಂದಿತ್ತು. ಅಲ್ಲಿಗೆ ಆತನ…

3 years ago