ರಂಗಾಯಣದಲ್ಲಿ ಪ್ರದರ್ಶನ ಕಂಡ `ಸಾಂಬಶಿವ ಪ್ರಹಸನ’ ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡಿರುವುದಕ್ಕೆ ಸ್ವತಃ ನಾಟಕದ ಕರ್ತೃ ಡಾ. ಚಂದ್ರಶೇಖರ ಕಂಬಾರರು ಆಕ್ಷೇಪ ವ್ಯಕ್ತಪಡಿಸಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ತಮ್ಮ 'ಸಾಂಬಶಿವ ಪ್ರಸಂಗ' ನಾಟಕವನ್ನು ತಿರುಚಿ ತಮ್ಮ ಅನುಮತಿಯಿಲ್ಲದೆ ನಾಟಕ ಪ್ರದರ್ಶಿಸಿರುವ ರಂಗಾಯಣದ ಮೈಸೂರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ…