News Karnataka Kannada
Monday, April 29 2024
ಕ್ರೀಡೆ

ಸದೀರ ಸಮರ “ವಿಕ್ರಮʼ: ಗೆಲುವಿನ ಖಾತೆ ಓಪನ್‌ ಮಾಡಿದ ಶ್ರೀಲಂಕಾ

Sadeera Battle 'Vikrama': Sri Lanka open their account
Photo Credit : News Kannada

ಲಖನೌ: ವಿಶ್ವಕಪ್‌ ಟೂರ್ನಿಯಲ್ಲಿ ಸದೀರ ಸಮರ ವಿಕ್ರಮ ಅವರ ಅಜೇಯ 91 ರನ್‌ ಗಳ ನೆರವಿನಿಂದ ಶ್ರೀಲಂಕಾ ತಂಡ ಗೆಲುವಿನ ಖಾತೆ ಓಪನ್‌ ಮಾಡಿದೆ. ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕುಶಾಲ್ ಮೆಂಡಿಸ್ ಬಳಗ ಐದು ವಿಕೆಟ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಮಣಿಸಿತು. ತನ್ನ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದ್ದ ಡಚ್ ತಂಡ, ಲಖನೌದ ಅತಿಯಾದ ಸೆಕೆಯಲ್ಲಿ ಲಂಕಾ ಒಡ್ಡಿದ ಸವಾಲು ಬದಿಗೊತ್ತಲು ವಿಫಲವಾಯಿತು.

ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾ ಮೂಲದ ಸೈಬ್ರಾಂಡ್ ಇಂಗೆಲ್‌ಬ್ರೆಕ್ಟ್ (70: 82 ಎ) ಮತ್ತು ಲೋಗನ್ ವಾನ್ ಬೀಕ್ (59; 75 ಎ.) ಅವರ ಅರ್ಧಶತಕಗಳ ನೆರವಿನಿಂದ 49.4 ಓವರ್‌ಗಳಲ್ಲಿ 262 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಲಂಕಾ ತಂಡಕ್ಕೆ ಅರ್ಯನ್ ದತ್ (44ಕ್ಕೆ 3) ಅವರು ಆರಂಭಿಕ ಆಘಾತ ನೀಡಿದರು. ಕುಶಾಲ್ ಪರರಾ (5) ಮತ್ತು ನಾಯಕ ಮೆಂಡಿಸ್ (8) ಅವರನ್ನು ‘ಪವರ್ ಪ್ಲೇ’ ಅವಧಿಯೊಳಗೆ ದತ್ ಪೆವಿಲಿಯನ್‌ಗಟ್ಟಿದರು. ಆ ಬಳಿಕ ಲಯ ಕಂಡುಕೊಂಡ ಲಂಕಾ ಬ್ಯಾಟರ್‌ಗಳು, ಒತ್ತಡಕ್ಕೆ ಒಳಗಾಗದೆ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು