ಕ್ರೀಡೆ

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಆರ್‌ಸಿಬಿ: ಹೆಸರು ಚೇಂಜ್ ಮಾಡಿದ ರಿಷಬ್ ಶೆಟ್ಟಿ

ಬೆಂಗಳೂರು: ಆರ್​ಸಿಬಿ ಯಾಕೆ ಇನ್ನೂ ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಕಪ್​ ಎತ್ತುವ ಸನಿಹಕ್ಕೆ ಹೋಗಿ ಅದೆಷ್ಟೋ ಬಾರಿ ಎಡವಿದ್ದೂ ಉಂಟು.

ಇನ್ನೂ ಕೆಲವರು ಆರ್​ಸಿಬಿ ಎಂಬ ಹೆಸರಲ್ಲೇ ನಮಗೆ ಲಕ್ ಇಲ್ಲ. ಅದನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಇತ್ತು. ಇದೀಗ ಆರ್​​ಸಿಬಿ ಅಭಿಮಾನಿಗಳ ಮದಹಾಸೆಯನ್ನು ಫ್ರಾಂಚೈಸಿ ಈಡೇರಿಸ್ತಿದೆ. ಬೆಳ್ಳಂಬೆಳಗ್ಗೆ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಒಂದನ್ನು ಹರಿಬಿಟ್ಟಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಅಚ್ಚರಿಗೂ ಒಳಗಾಗಿದ್ದಾರೆ.

ಹೌದು. . ಕಾಂತಾರ ವೇಷದ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ, ಬಾರು ಕೋಲು ಹಿಡಿದು ಕೆಂಪು ಬಣ್ಣದ ಶಾಲನ್ನು ಹೆಗಲ ಮೇಲೆ ಹಾಕಿ ಎಂಟ್ರಿ ಕೊಡ್ತಾರೆ. ಅಲ್ಲಿ ಮೂರು ಕೂಣಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅವುಗಳ ಮೇಲೆ ಕ್ರಮವಾಗಿ ರಾಯಲ್, ಚಾಲೆಂಜರ್ಸ್, ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್​​ನಲ್ಲಿ ಬರೆಯಲಾಗಿದೆ. ಅದನ್ನು ಕೋಣಗಳಿಗೆ ಹೊದಿಸಲಾಗಿದೆ. ‘ರಾಯಲ್’, ‘ಚಾಲೇಂಜರ್ಸ್​’ ಎಂದು ಬರೆದಿದ್ದ ಕೋಣಗಳ ಬೆನ್ನು ತಟ್ಟಿ ಪಾಸ್ ಮಾಡಿದ ರಿಷಬ್ ಶೆಟ್ಟಿ, BANGALORE ಎಂಬ ಕೋಣದ ಬೆನ್ನ ಮೇಲೆ ಕೈಯಿಟ್ಟು ‘ಇದು ಬೇಡ. ಭಟ್ಟರೆ, ಇದು ಬೇಡ! ತೆಗೆದುಕೊಂಡು ಹೋಗಿ’ ಎನ್ನುತ್ತಿರುವ ವಿಡಿಯೋ ಇದಾಗಿದೆ.

ನಂತರ ಒಂದು ನೋಟ ಬೀರುವ ರಿಷಬ್ ಶೆಟ್ಟಿ ‘ಅರ್ಥ ಆಯ್ತಾ..’ ಎಂದು ಪ್ರಶ್ನೆ ಮಾಡ್ತಾರೆ. ಈ ವಿಡಿಯೋ ಪೋಸ್ಟ್​ ಮಾಡಿರುವ ಆರ್​ಸಿಬಿ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಪ್ರಶ್ನೆ ಮಾಡಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎಂಬ ಹೆಸರಿನಲ್ಲೇ ದೋಷ ಇದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಈ ದೋಷವನ್ನು ನಿವಾರಿಸಿ ‘ಈ ಸಲ ಕಪ್’ ಎತ್ತಲು ಮುಂದಾಗಿರುವ ಫ್ರಾಂಚೈಸಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ. Royal Challengers Bangalore ಇದ್ದ ಹೆಸರು Royal Challengers Bengaluru ಎಂದಾಗಲಿದೆ. ಕನ್ನಡದಲ್ಲಿ ‘ಬೆಂಗಳೂರು’ ಎಂದು ಹೇಳುವಂತೆ, ಇಂಗ್ಲಿಷ್​​ನಲ್ಲೂ ಬೆಂಗಳೂರು ಎಂದು ಹೇಳಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಅಂದರೆ BANGALORE ಬದಲಾಗಿ ‘BENGALURU’ ಎಂದು ಹೆಸರು ಬದಲಾಗಲಿದೆ. ಇದನ್ನು ಮಾರ್ಚ್​ 19 ರಂದು ಆರ್​ಸಿಬಿ ಅನ್​ಬಾಕ್ಸ್ ಮಾಡಲಿದೆ.

Ashitha S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

8 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago